Advertisement

Drown: ನೀರಿನಲ್ಲಿ ಮುಳುಗಿ ಐವರ ದುರ್ಮರಣ

08:53 PM May 22, 2023 | Team Udayavani |

ತರೀಕೆರೆ/ಶ್ರೀರಂಗಪಟ್ಟಣ: ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆ ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯ ಕಾವೇರಿ ನದಿಯಲ್ಲಿ ಸಂಭವಿಸಿದ ಪ್ರತ್ಯೇಕ ದುರಂತದಲ್ಲಿ ನೀರಿನಲ್ಲಿ ಮುಳುಗಿ ಐವರು ಸಾವನ್ನಪ್ಪಿದ್ದಾರೆ.

Advertisement

ಭಾನುವಾರ ಲಕ್ಕವಳ್ಳಿ ಸಮೀಪದಲ್ಲಿರುವ ಭದ್ರಾ ಬಲದಂಡೆ ನಾಲೆಗೆ ಕಾಲು ಜಾರಿ ಬಿದ್ದು ಲಕ್ಕವಳ್ಳಿ ಎ.ವಿ. ಕ್ಯಾಂಪ್‌ನ ನಿವಾಸಿ ರವಿಚಂದ್ರ (35), ಸಹೋದರಿಯ ಮಕ್ಕಳಾದ ಶಿವಮೊಗ್ಗದ ನಿವಾಸಿ ಅನನ್ಯ (21) ಮತ್ತು ನಂಜನಗೂಡಿನ ನಿವಾಸಿ ಸಾಮವೇಣಿ (16) ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಸಂಬಂಧಿಕರ ಮನೆಗೆ ಬಂದಿದ್ದ ಅವರು ಸಂಜೆ ವೇಳೆ ವಾಯು ವಿಹಾರಕ್ಕೆ ತೆರಳಿ ಸಮೀಪದ ನಾಲೆಯಲ್ಲಿ ಆಟವಾಡಲು ಹೋದಾಗ ಕಾಲು ಜಾರಿ ಬಿದ್ದಿದ್ದಾರೆ. ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಹೋದಾಗ ಘಟನೆ ಸಂಭವಿಸಿದೆ. ಅನನ್ಯ ಮೃತದೇಹ ದೊರಕಿದ್ದು ರವಿಚಂದ್ರ ಮತ್ತು ಸಾಮವೇಣಿಯ ಮೃತದೇಹ ಪತ್ತೆಯಾಗಿಲ್ಲ.

ಇನ್ನು ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಬಳಿಯ ಬಲಮುರಿ ಪ್ರಕೃತಿ ತಾಣದ ಬಳಿ ಕಾವೇರಿ ನದಿಯಲ್ಲಿ ಭಾನುವಾರ ಸಂಜೆ ಈಜಲು ತೆರಳಿದ್ದ ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಸ್ನೇಹಿತರಿಬ್ಬರು ಸುಳಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಧನಂಜಯ(19) ಹಾಗೂ ದರ್ಶನ್‌(19) ಭಾನುವಾರ ಬಲಮುರಿಯಲ್ಲಿರುವ ಕಲ್ಯಾಣ ಮಂಟಪದಲ್ಲಿನ ಸಂಬಂಧಿಕರ ಮದುವೆಗೆಂದು ಬಂದಿದ್ದರು. ಮದುವೆ ಕಾರ್ಯ ಮುಗಿದ ನಂತರ ಸಮೀಪದ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದಾರೆ. ಈ ಸಂದರ್ಭದಲ್ಲಿ ನದಿಯಲ್ಲಿನ ಸುಳಿಗೆ ಸಿಲುಕಿ ಸ್ನೇಹಿತರಿಬ್ಬರು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next