Advertisement

ಮುಂಬಯಿ: ತ್ಯಾಜ್ಯ ಗುಂಡಿ ಸ್ವಚ್ಛತೆ ಇಳಿದಿದ್ದ ಐವರು ಮೃತ್ಯು

11:05 PM May 13, 2023 | Team Udayavani |

ಮುಂಬಯಿ: ತ್ಯಾಜ್ಯ ಗುಂಡಿ (ಸೆಪ್ಟಿಕ್‌ ಟ್ಯಾಂಕ್‌) ಸ್ವಚ್ಛಗೊಳಿಸುತ್ತಿದ್ದ ಐವರು ಕಾರ್ಮಿ ಕರು ವಿಷಾನಿಲ ಸೇವನೆಯಿಂದಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ವರದಿಯಾಗಿದೆ.

Advertisement

ಭೌಚಾ ತಾಂಡಾ ಎನ್ನುವ ಪ್ರದೇಶದಲ್ಲಿದ್ದ ಹೊಲ ವೊಂದರಲ್ಲಿ ಗುಂಡಿ ಸ್ವಚ್ಛಗೊಳಿಸುವ ಕಾರ್ಯನಿಮಿತ್ತ 6 ಮಂದಿ ಕಾರ್ಮಿಕರು ತೆರಳಿದ್ದರು. ಈ ವೇಳೆ ಚರಂಡಿ ಒಳಗೆ ಇಳಿಯುತ್ತಿದ್ದಂತೆ ವಿಷಾನಿಲ ಸೇವನೆಯಿಂದ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಐವರು ಕಾರ್ಮಿಕರು ಮೃತರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮತ್ತೂಬ್ಬ ಕಾರ್ಮಿಕನೂ ಅಸ್ವಸ್ಥನಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸೋನ್‌ಪೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next