Advertisement

ಪಾಲಘರ್‌ನಲ್ಲಿ ಮರಕ್ಕೆ ಕಾರು ಢಿಕ್ಕಿ: ಐವರ ದಾರುಣ ಸಾವು

10:56 AM Feb 07, 2018 | udayavani editorial |

ಮುಂಬಯಿ : ಇಂದು ನಸುಕಿನ ವೇಳೆ ನೆರೆಯ ಪಾಲಘರ್‌ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಧಾವಿಸುತ್ತಿದ್ದ  ಕಾರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. 

Advertisement

ಕಾರು ವದ್ರಾಯಿ ಗ್ರಾಮದಿಂದ ಪಾಲಘರ್‌ ಪಟ್ಟಣಕ್ಕೆ ತೆರಳುತ್ತಿತ್ತು. ಪಾಟಿಲ್‌ವಾಡಿ ಸಮೀಪ ನಸುಕಿನ 3 ಗಂಟೆಯ ಹೊತ್ತಿಗೆ ಕಾರಿನ ಚಾಲಕನಿಗೆ ನಿಯಂತ್ರಣ ತಪ್ಪಿದ ಕಾರಣ ಅದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆಯಿತು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ನತದೃಷ್ಟ ಕಾರಿನಲ್ಲಿದ್ದ ಎಲ್ಲರೂ 25ರಿಂದ 30ರ ಹರೆಯದವರಾಗಿದ್ದು ಅಪಘಾತ ಸಂಭವಿಸಿದ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ಬಹುತೇಕ ಕ್ಷೀಣವಾಗಿದ್ದುದರಿಂದ ಸ್ಥಳೀಯರಿಂದಾಗಲೀ ಅಥವಾ ಯಾರಿಂದಲಾದರೂ ಆಗಲೀ ನೆರವು ಸಿಗದೇ ಹೋಯಿತು ಎಂದು ಪೊಲೀಸರು ಹೇಳಿದರು. 

ಅಪಘಾತ ಸಂಭವಿಸಿದ ಸ್ವಲ್ಪ ಹೊತ್ತಿನ ಬಳಿಕ ಈ ಮಾರ್ಗವಾಗಿ ಸಾಗಿ ಕಾರೊಂದರ ಚಾಲಕನು ಪೊಲೀಸರಿಗೆ ಮಾಹಿತಿ ನೀಡಿದ. ನತದೃಷ್ಟ ಕಾರಿನ ಐವರೂ ಮೃತ ಪ್ರಯಾಣಿಕರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಾಲಘರ್‌ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಶತಪತಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next