Advertisement

ಛತ್ತೀಸ್‌ಗಢ: ಹಸುವನ್ನು ಸೇತುವೆಯಿಂದ ಕೆಳಗೆಸೆದಿದ್ದವರ ಬಂಧನ

10:22 PM Aug 12, 2022 | Team Udayavani |

ರಾಯಪುರ: ಹಸುವಿನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ, ಅದನ್ನು ಸೇತುವೆಯಿಂದ ಕೆಳಗೆಸೆದಿದ್ದ ಐವರು ದುಷ್ಕರ್ಮಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Advertisement

ಛತ್ತೀಸ್‌ಗಢದ ಜಾಂಜಿಗಿರ್‌-ಛಂಪಾ ಜಿಲ್ಲೆಯ ಲಾಲ್‌ವುತಿ ಗ್ರಾಮದಲ್ಲಿ ಈ ರೀತಿ ಘಟನೆ ನಡೆದಿತ್ತು. ಆ.10ರಂದು ಹತ್ತಾರು ಯುವಕರು ಶಿವಕುಮಾರ್‌ ಸಾಹು ಅವರಿಗೆ ಸೇರಿದ ಹಸುವಿನ ಮೇಲೆ ಹಲ್ಲೆ ನಡೆಸಿ, ಅದನ್ನು ಸೇತುವೆಯಿಂದ ನದಿಗೆ ಎಸೆದಿದ್ದಾರೆ.

ಈ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಪೊಲೀಸರಿಗೆ ನೀಡಲಾಗಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next