Advertisement
ಸುಮಾರು 35 ವರ್ಷಗಳಿಂದಲೂ ಮಳೆಗಾಲ ಋತುವಿನ ಮೀನುಗಾರಿಕೆಗೆ ಮೂರು ತಿಂಗಳ ಅವಧಿಯನ್ನು ನೀಡಲಾಗುತ್ತಿದ್ದು, ಪ್ರಸ್ತುತ 3 ವರ್ಷದಿಂದ ಅದನ್ನು 2 ತಿಂಗಳಿಗೆ ಕುಂಠಿತಗೊಳಿಸಲಾಗಿದೆ. ಮಳೆಗಾಳಿ, ಪ್ರಾಕೃತಿಕ ವೈಪರೀತ್ಯಾಗಳು ಸಂಭವಿಸುವುದರಿಂದ ಈ ಎರಡು ತಿಂಗಳ ಅವಧಿಯಲ್ಲಿ ಮೀನುಗಾರಿಕೆ ನಡೆಸಲು ಹೆಚ್ಚು ದಿನ ಸಿಗುತ್ತಿಲ್ಲ. ಪ್ರಸ್ತುತ ಈ ಋತುವಿನಲ್ಲಿ ಇದುವರೆಗೂ ಯಾವುದೇ ರೀತಿಯ ಮೀನುಗಾರಿಕೆಯಲ್ಲಿ ಸಂಪಾದನೆ ಆಗಿಲ್ಲ. ಈ ಮೂರು ಸಂಘದ ಅಡಿಯಲ್ಲಿ ಸುಮಾರು 5 ಸಾವಿರ ಮೀನುಗಾರರು ಇದ್ದಾರೆ. ಇದೀಗ ಈ ಎಲ್ಲ ಮೀನುಗಾರರ ಕುಟುಂಬದ ಜೀವನ ನಿರ್ವಾಹಣೆ ಕಷ್ಟದಾಯಕವಾಗಿದೆ. ಆದ್ದರಿಂದ ತಾವು ಈ ಮಳೆಗಾಲದ ಋತುವಿನಲ್ಲಿ ನಾಡದೋಣಿ ಮೀನುಗಾರಿಕೆಗೆ ಹಿಂದಿನಂತೆ ಆ. 30ರವರೆಗೆ ಅವಧಿಯನ್ನು ವಿಸ್ತರಿಸಬೇಕು ಮತ್ತು ಯಾಂತ್ರಿಕ ಮೀನುಗಾರಿಕೆಗೆ ಸೆ. 1ರಿಂದ ಅವಕಾಶವನ್ನು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
Advertisement
ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಯ ಅವಧಿ ವಿಸ್ತರಣೆಗೆ ಆಗ್ರಹ
04:54 PM Jul 21, 2020 | sudhir |
Advertisement
Udayavani is now on Telegram. Click here to join our channel and stay updated with the latest news.