Advertisement

ಮೊದಲ ಬಾರಿ ಸಚಿವರಾದವರು

11:13 PM Aug 04, 2021 | Team Udayavani |

ಹಾಲಪ್ಪ ಆಚಾರ್‌,ಕ್ಷೇತ್ರ: ಯಲಬುರ್ಗಾ :

Advertisement

1952ರಲ್ಲಿ ಜನಿಸಿದ ಇವರು ಮೂಲತಃ ಕೃಷಿಕರು. ಕೃಷಿ ಕ್ಷೇತ್ರದ ಸಾಧನೆಗೆಂದು ಹಲವು ಪ್ರಶಸ್ತಿಗಳನ್ನು ಪಡೆದು ಮಾದರಿಯಾಗಿದ್ದಾರೆ. 1978ರಲ್ಲಿ ಸ್ಥಳೀಯ ಸಂಘ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು. 2010ರಲ್ಲಿ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿ, ರಾಯಚೂರು – ಕೊಪ್ಪಳ ಜಿÇÉೆಯಗಳನ್ನು 6 ವರ್ಷ ಪ್ರತಿನಿಧಿಸಿದರು. 2011ರಿಂದ 2017 ವರೆಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿದ್ದರು. ಇಫೊÅà ಸಂಸ್ಥೆ ಮತ್ತು ಅಪೆಕ್ಸ್‌ ಬ್ಯಾಂಕ್‌ನ ನಿರ್ದೇಶಕರಾಗಿ ಸುಮಾರು 10 ವರ್ಷ ಮುನ್ನಡೆಸಿದ್ದಾರೆ. 2018ರ ಚುನಾವಣೆಯಲ್ಲಿ ಸುಮಾರು 13 ಸಾವಿರ ಮತಗಳ ಅಂತರಿಂದ ಪ್ರಥಮ ಬಾರಿಗೆ ವಿಧಾನಸಭೆ  ಪ್ರವೇಶ ಮಾಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ಸಹಕಾರ ಮಹಾಮಂಡಳ ನಿರ್ವಹಣೆ ಅನುಭವಿದೆ.

ಬಿ.ಸಿ.ನಾಗೇಶ್‌,ಕ್ಷೇತ್ರ: ತಿಪಟೂರು :

ಕೊಬ್ಬರಿ ವ್ಯಾಪಾರದ ಮೂಲಕ ಬೆಳ್ಳೂರು ಕುಟುಂಬ ಎಂದೇ ಹೆಸರಾಗಿದ್ದ ಮಾಜಿ ಶಾಸಕ ದಿ| ಬಿ.ಎಸ್‌. ಚಂದ್ರಶೇಖರಯ್ಯ ಅವರ ಪುತ್ರ ಬಿ.ಸಿ. ನಾಗೇಶ್‌ ತಿಪಟೂರು ವಿಧಾನ ಸಭಾ ಕ್ಷೇತ್ರದಿಂದ ಎರಡನೇ  ಬಾರಿ  ಶಾಸಕರಾದವರು.   ಇವರ ತಂದೆ ಬಿ.ಎಸ್‌.ಚಂದ್ರ ಶೇಖ ರಯ್ಯ ರಾಮಕೃಷ್ಣ ಹೆಗಡೆ  ನೇತೃತ್ವದ ಜನತಾ ಪಕ್ಷದಿಂದ ಸ್ಪರ್ಧಿಸಿ  ಒಂದು ಬಾರಿ ಶಾಸಕರಾಗಿದ್ದರು. ಮೊದಲಿ ನಿಂದಲೂ ಆರ್‌ಎಸ್‌ಎಸ್‌ ಜತೆ ನಿಕಟ ಸಂಪರ್ಕ ಹೊಂದಿದ್ದ ಬಿ.ಸಿ. ನಾಗೇಶ್‌ ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡವರು. ಎರಡು ಬಾರಿ ಚುನಾವಣೆಯಲ್ಲಿ ಸೋಲು ಮತ್ತು ಎರಡು ಬಾರಿ ಗೆಲುವಿನ ಮೂಲಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು.  2013 ರಲ್ಲಿ  ಅಂದಿನ ಸಿಎಂ ಯಡಿಯೂರಪ್ಪ, ಸದಾನಂದ ಗೌಡ ಮತ್ತು ಜಗದೀಶ್‌ ಶೆಟ್ಟರ್‌ ಅವರಿಂದ ಹೆಚ್ಚಿನ ಅನುದಾನ ತರುವ ಮೂಲಕ  ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು ನಾಗೇಶ್‌.

ಆರಗ ಜ್ಞಾನೇಂದ್ರ,ಕ್ಷೇತ್ರ:ತೀರ್ಥಹಳ್ಳಿ  :

Advertisement

1951ರಲ್ಲಿ ಬಡಕುಟುಂಬದಲ್ಲಿ ಜನನ. ಬಡತನ ಕಾರಣದಿಂದಲೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಇವರು ಆರ್‌ಎಸ್‌ಎಸ್‌ ಪ್ರಮುಖರ ಸಹಕಾರದಿಂದ ಪದವಿ ಶಿಕ್ಷಣ ಪೂರೈಸಿದರು. ತುರ್ತು ಪರಿಸ್ಥಿತಿ ಹೋರಾಟದಲ್ಲಿ ಭಾಗಿಯಾಗಿ ಆರು ತಿಂಗಳು ಜೈಲು ವಾಸದಲ್ಲಿದ್ದರು. ಪ್ರಥಮವಾಗಿ ತಾಲೂಕು ಬೋರ್ಡ್‌ ಚುನಾವಣೆ ಮೂಲಕ ರಾಜಕಾರಣಕ್ಕೆ ಬಂದಿದ್ದು, 1983 ವಿಧಾನಸಬಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 2000 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಬಳಿಕ 1985,1989 ರಲ್ಲಿಯೂ ಸೋಲುಂಡಿದ್ದರು. ಬಳಿಕ ಬಿಜೆಪಿ ಜಿÇÉಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಶಿವಮೊಗ್ಗ ಹಾಲು ಒಕ್ಕೂಟಕ್ಕೆ ನಿರ್ದೇಶಕರು, ಅಧ್ಯಕ್ಷರಾಗಿ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ರಾಜ್ಯ ಅಡಿಕೆ ಬೆಳೆಗಾರರ  ಕಾರ್ಯಪಡೆ ರಾಜ್ಯಾಧ್ಯಕ್ಷ, ಹೌಸಿಂಗ್‌ ಬೋರ್ಡ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.   1994 ರ ವಿಧಾನ ಸಭೆಗೆ ಮೊದಲ ಬಾರಿ ಆಯ್ಕೆಯಾಗಿದ್ದರು. ಅನಂತರದಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 2008 ಮತ್ತು 2013 ರಲ್ಲಿ ಸೋಲುಂಡು, 2018 ರಲ್ಲಿ ದಾಖಲೆಯ 22,000 ಅಂತರ ದ ಗೆಲುವು ಸಾಧಿಸಿದ್ದರು. ಸೈದ್ಧಾಂತಿಕ ಬದ್ಧತೆ, ಪಕ್ಷ ನಿಷ್ಠೆ, ಜನಪರ ಹೋರಾಟದಲ್ಲಿ  ಜ್ಞಾನೇಂದ್ರ ಗುರುತಿಸಿಕೊಂಡಿದ್ದಾರೆ.

ಸುನಿಲ್‌ ಕುಮಾರ್‌,ಕ್ಷೇತ್ರ: ಕಾರ್ಕಳ :

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ 3ನೇ ಬಾರಿ ಶಾಸಕರಾಗಿರವ ಸುನಿಲ್‌ ಕುಮಾರ್‌ ಅವರು ಬಿಲ್ಲವ ಅಥವಾ ಈಡಿಗ ಸಮುದಾಯಕ್ಕೆ ಸೇರಿದವರಾಗಿ ದ್ದರೂ, ಎಲ್ಲಿಯೂ ತಮ್ಮನ್ನು ಸಮುದಾಯದ ಆಧಾರದಲ್ಲಿ ಗುರುತಿಸಿಕೊಳ್ಳದೇ, ಹಿಂದುತ್ವ, ಸಂಘಪರಿವಾರದ ಹಿನ್ನೆಲೆಯಲ್ಲೇ ಗುರುತಿಸಿಕೊಂಡು ಬಂದಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. 2004ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದ ಇವರು 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೋಪಾಲ ಭಂಡಾರಿ ಅವರ ವಿರುದ್ಧ ಸೋತಿದ್ದರು. 2013 ಮತ್ತು 2018ರ ಚುನಾವಣೆಯಲ್ಲಿ ಸತತ ಗೆದ್ದಿದ್ದಾರೆ. ಪಕ್ಷದ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ಪಕ್ಷ ಸಂಘಟನೆಯಲ್ಲೂ ಸಕ್ರಿಯರಾಗಿದ್ದಾರೆ.

ಶಂಕರ ಪಾಟೀಲ,ಕ್ಷೇತ್ರ: ನವಲಗುಂದ :

ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ  ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. 1969, ಜೂ.1ರಂದು ನವಲಗುಂದ ತಾಲೂಕಿನ ಅಮರಗೋಳದಲ್ಲಿ ಜನಿಸಿದ್ದು, ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಬಿಎ ಪದವಿ ಪಡೆದಿರುವ ಮುನೇನಕೊಪ್ಪ ಅವರು ರಾಜಕೀಯ ಪ್ರವೇಶಕ್ಕೂ ಮುನ್ನ ಕೃಷಿ-ವ್ಯವಹಾರದಲ್ಲಿ ತೊಡಗಿದ್ದರು. ನವಲಗುಂದ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಮುನೇನಕೊಪ್ಪ  ಮೊದಲ ಯತ್ನದಲ್ಲೇ ವಿಧಾನಸಭೆ ಪ್ರವೇಶ ಮಾಡಿದ್ದರು. 2008-2013ರ ಅವಧಿಯಲ್ಲಿ ಶಾಸಕರಾಗಿದ್ದಷ್ಟೇ ಅಲ್ಲದೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿದ್ದರು. 2018ರಲ್ಲಿ ಮತ್ತೂಮ್ಮೆ ನವಲಗುಂದ ಕ್ಷೇತ್ರದಿಂದ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದರು. 2019ರಲ್ಲಿ  ಜೆಡಿಎಸ್‌-ಕಾಂಗ್ರೆಸ್‌ಸಮ್ಮಿಶ್ರ ಸರ ಕಾ ರ ಪತನಗೊಂಡು ಬಿಜೆಪಿ  ಸರಕಾರ ಅಧಿಕಾರಕ್ಕೆ ಬಂದ ಅನಂತರ 2020ರಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ರಾಜಕೀಯ ಜತೆಗೆ ಸಮಾಜದಲ್ಲೂ ತಮ್ಮದೇ  ಪ್ರಭಾವ ಹೊಂದಿರುವ ಅವರು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿಯೂ ನೇಮಕಗೊಂಡಿದ್ದಾರೆ.

ಮುನಿರತ್ನ ,ಕ್ಷೇತ್ರ: ರಾಜರಾಜೇಶ್ವರಿನಗರ :

ಮೂಲತಃ ಕಾಂಗ್ರೆಸ್‌ನ ಮುನಿರತ್ನ ಎರಡು ಬಾರಿ ಕಾಂಗ್ರೆಸ್‌ನಿಂದ ರಾಜರಾಜೇಶ್ವರಿನಗರದಿಂದ ಶಾಸಕರಾಗಿ ಆಯ್ಕೆ ಯಾಗಿ  ಆಪರೇಷನ್‌ ಕಮಲ ಕಾರ್ಯಾಚರಣೆಯಡಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿದರು. ಗೆಲುವಿನ ಅನಂತರ ಸಚಿವರಾಗಲು ಸಾಕಷ್ಟು ಪ್ರಯಾಸ ಪಡಬೇಕಾಯಿತು. ಹಲವು ಆರೋಪಗಳ ಹಿನ್ನೆಲೆಯಲ್ಲಿ ಸಚಿವಗಿರಿಯಿಂದ ವಂಚಿತರಾಗಿದ್ದರು. ಬಿಜೆಪಿ ಸರ ಕಾ ರ ರಚನೆಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಸಚಿವಗಿರಿ ಪಡೆದು ಕೊಂಡಿದ್ದಾರೆ.  ವೃತ್ತಿಯಲ್ಲಿ ಗುತ್ತಿಗೆದಾರರಾಗಿ ಅನಂತರ ಸಾರ್ವಜನಿಕ ಸೇವೆಗೆ ಮಹಾ ನಗರ ಪಾಲಿಕೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಅವರು ಅನಂತರ ವಿಧಾನಸಭೆ ಪ್ರವೇಶಿಸಿದರು. ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.  ಹಿಂದು ಳಿದ ನಾಯ್ಡು ಸಮುದಾಯಕ್ಕೆ ಸೇರಿದ ಇವರು ಬಿಜೆಪಿ ಸರಕಾರ ರಚನೆಗೆ ನೆರವಾಗಿದ್ದ ಕೋಟಾದಡಿ ಸಚಿವ ಸ್ಥಾನ ಪಡೆದಿದ್ದಾರೆ. ಆದರೆ, ಇವರ ಸೇರ್ಪಡೆಯಿಂದ ಬೆಂಗಳೂರು ಕೋಟಾದಲ್ಲಿ ಮತ್ತೂಬ್ಬರು ಅವಕಾಶ ಕಳೆದುಕೊಳ್ಳುವಂತಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next