Advertisement

ರೈಲಿನಲ್ಲಿ ಗುಂಡಿನ ದಾಳಿ: ಬೀದರ್ ನ ವ್ಯಕ್ತಿ ಬಲಿ

07:34 PM Aug 01, 2023 | Team Udayavani |

ಬೀದರ: ಮಹಾರಾಷ್ಟ್ರದ ಪಾಲ್ಘರ್ ನಿಲ್ದಾದ ಬಳಿ ಸೋಮವಾರ ಚಲಿಸುತ್ತಿದ್ದ ಜೈಪುರ್ ಎಕ್ಸ್ ಪ್ರೆಸ್ ರೈಲಿನಲ್ಲಿ‌ ರೈಲ್ವೆ ರಕ್ಷಣಾ ಪಡೆಯ (ಆರ್.ಪಿ.ಎಫ್) ಪೇದೆ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಪ್ರಯಾಣಿಕರಲ್ಲಿ‌ ಬೀದರ ಮೂಲದ ವ್ಯಕ್ತಿಯೊಬ್ಬರು ಸೇರಿದ್ದಾರೆ.

Advertisement

ಚಲಿಸುತ್ತಿದ್ದ ರೈಲಿನಲ್ಲಿ ಪೇದೆ ಚೇತನಕುಮಾರ ಚೌಧರಿ ಎಂಬಾತ ತನ್ನ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಬೀದರ ತಾಲೂಕಿನ ಹಮೀಲಾಪುರದ ನಿವಾಸಿ ಸೈಯದ್ ಸೈಫೋದ್ದಿನ್ ಮುನಿರೊದ್ದಿನ್ (38) ಒಬ್ಬರಾಗಿರುವುದು ದುರ್ದೈವದ ಸಂಗತಿ.

ಹೈದರಾಬಾದ್‌ನಲ್ಲಿ ವಾಸವಿದ್ದ ಸೈಫೋದ್ದೀನ್, ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಹೈದರಾಬಾದ್‌ನಿಂದ ಅಜ್ಮೀರ್‌ಗೆ ಹೋಗಿ ಹಿಂತಿರುಗಿ ಬರುವಾಗ ಈ ದುರ್ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮೃತ ಸೈಫೋದ್ದೀನ್ ಅವರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳು, ಇಬ್ಬರು ಸಹೋದರರು ಇದ್ದಾರೆ. ಹಮಿಲಾಪುರದಲ್ಲಿ ಆ.2ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next