Advertisement

ಸಂತೆ ಮೈದಾನದಲ್ಲಿನ ಮರಗಳಿಗೆ ಬೆಂಕಿ

05:36 PM Apr 18, 2021 | Team Udayavani |

ಕೊರಟಗೆರೆ: ಸಂತೆ ಮೈದಾನದ ಖಾಲಿಜಾಗದಲ್ಲಿರುವ ಹಳೆಯ ಮರಗಳಿಗೆಕಿಡಿಗೇಡಿಗಳು ಬೆಂಕಿ ಹಾಕಿ ಸುಡುತ್ತಿದ್ದರೂ,ಗ್ರಾಪಂ ಗಮನಹರಿಸದೇ ಮೌನ ವಹಿಸಿದೆಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ತೋವಿನಕೆರೆಗೆ ಹೊಂದಿಕೊಂಡಿರುವಜನಾರ್ದನ ತೋಪಿನಹಳ್ಳಿಯಲ್ಲಿಶತಮಾನಗಳಿಂದ ಪ್ರತಿ ಶುಕ್ರವಾರ ಸಂತೆನಡೆಯುತ್ತದೆ. ತೀವ್ರ ಬರಗಾಲದ ಸಮಯದಲ್ಲಿಹಲವು ತಿಂಗಳು ಗೋ ಶಾಲೆಯು ನಡೆದಿತ್ತು.ಸಂತೆ ಮೈದಾನದಲ್ಲಿ ಪೂರ್ವಿಕರು ನೆರಳಿಗಾಗಿಹಲವು ರೀತಿಯ ಮರಗಳನ್ನು ಹಾಕಿದ್ದು,ನೂರಕ್ಕೂ ಹೆಚ್ಚು ವರ್ಷಗಳಿಂದ ಇವೆ.

ಚೆನ್ನಾಗಿರುವ ಮರಗಳನ್ನು ಸೌದೆಗಾಗಿ ಕಡಿದುನಾಶ ಮಾಡುತ್ತಿದ್ದರೆ, ಕೆಲವರು ಬೆಂಕಿ ಹಾಕಿಸುಡುತ್ತಿದ್ದಾರೆ. 2015ರಲ್ಲಿ ಈ ಜಾಗದಲ್ಲಿದ್ದಗೋಶಾಲೆ ರಾಜ್ಯದ ಗಮನ ಸೆಳೆದಿತ್ತು.ಮೈದಾನದ ಮರಗಳ ನೆರಳು ಗೋಶಾಲೆನಡೆಸಲು ಉತ್ತಮವಾಗಿದೆ ಎಂದು ಪ್ರಶಂಸೆವ್ಯಕ್ತಪಡಿಸಿ ಹಿರಿಯ ಅಧಿಕಾರಿಗಳು ಎರಡು ಸಲಗೋಶಾಲೆ ನಡೆಸಿದ್ದರು.

ಪ್ರತಿವರ್ಷ ಸಂತೆಹರಾಜು ಹಾಕಿ ಲಕ್ಷಾಂತರ ಹಣ ಗಳಿಸುವಪಂಚಾಯಿತಿಯವರು ಇಲ್ಲಿನ ಮರಗಳಸಂರಕ್ಷಣೆಗೆ ಯಾವ ಕ್ರಮವನ್ನು ತೆಗೆದುಕೊಂಡಿಲ್ಲಎಂದು ಸ್ಥಳೀಯರು ದೂರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next