Advertisement

ಸಿಲಿಂಡರ್‌ ಪೈಪ್‌ಗೆ ಬೆಂಕಿ: ತಪಿದ ಅನಾಹುತ

06:09 PM Jan 31, 2021 | Team Udayavani |

ಮಂಡ್ಯ: ನಗರದ ರೈತ ಸಭಾಂಗಣದ ಸಂಕೀರ್ಣದಲ್ಲಿರುವ ಮಹಾರಾಜ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಶನಿವಾರ ಮಧ್ಯಾಹ್ನ 12 ಗಂಟೆಗೆ ನಡೆದಿದೆ.

Advertisement

ಹೋಟೆಲ್‌ನ ಹಿಂಭಾಗದಲ್ಲಿ ಗ್ಯಾಸ್‌ ಸಿಲಿಂಡರ್‌ನ ಪೈಪ್‌ನಲ್ಲಿ ಬೆಂಕಿ ಕಾಣಿಸಿ ಕೊಂಡು ಉರಿಯಲಾರಂಭಿಸಿದೆ. ಇದರಿಂದ ಹೋಟೆಲ್‌ ನೊಳಗೆ ದಟ್ಟ ಹೊಗೆ ಕಾಣಿಸಿಕೊಂಡಿತು. ಇದರಿಂದ ಗ್ರಾಹಕರು ಆತಂಕದಿಂದ ಜೋರಾಗಿ ಕಿರುಚುತ್ತಾ ಹೊರಗೆ ಓಡಿ ಬಂದರು. ಅಷ್ಟರಲ್ಲಿ ಹೋಟೆಲ್‌ನ ಸಿಬ್ಬಂದಿ ಬೆಂಕಿ ಹಾರಿಸಲು ಮುಂದಾದರೂ ಗ್ಯಾಸ್‌ ಸೋರಿ ಕೆಯು ಹೆಚ್ಚಾಗಿ ಉರಿಯಲಾರಂಭಿಸಿದೆ.

ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಗ್ಯಾಸ್‌ ಸಿಲಿಂಡರ್‌ ಸರಬರಾಜು ಮಾಡುವ ಪೈಪ್‌ಗ್ಳು ಹಳೆಯದಾಗಿದ್ದರಿಂದ ಬೆಂಕಿಯ ಕಾವು ಹೆಚ್ಚಾಗಿ ಒಡೆದು ಹೋಗಿವೆ.

ಇದನ್ನೂ ಓದಿ:ಅನುದಾನ ಸಮರ್ಪಕ ಸದ್ಬಳಕೆಯಾಗಲಿ

ಒಂದೇ ಜಾಗದಲ್ಲಿ ಸುಮಾರು 8 ಗ್ಯಾಸ್‌ ಸಿಲಿಂಡರ್‌ಗಳನ್ನು ಇರಿಸಲಾಗಿತ್ತು. ಹೋಟೆಲ್‌ ಸಿಬ್ಬಂದಿಗಳ ಮುನ್ನೆಚ್ಚರಿಕೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next