Advertisement

ಅಗ್ನಿ ಅವಘಡ: ಮೇವಿನ ಬಣವೆಗಳು ಭಸ್ಮ

09:14 AM Jan 16, 2019 | Team Udayavani |

ಕಂಪ್ಲಿ: ಆಕಸ್ಮಿಕ ಬೆಂಕಿ ತಗುಲಿ ಭತ್ತದ ಮೇವಿನ ಬಣವಿಗಳು ಸಂಪೂರ್ಣ ಭಸ್ಮವಾಗಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ತಾಲೂಕಿನ ನಂ.10 ಮುದ್ದಾಪುರ ಹಾಗೂ ಶ್ರೀರಾಮರಂಗಾಪುರ ಗ್ರಾಮಗಳಲ್ಲಿ ಮಂಗಳವಾರ ಸಂಭವಿಸಿದೆ.

Advertisement

ಮುದ್ದಾಪುರ ಗ್ರಾಮದ ಬಳ್ಳಾರಿ ತಿಪ್ಪಯ್ಯ, ಬಳ್ಳಾರಿ ಶಿವರುದ್ರ ಎಂಬುವವರಿಗೆ ಸೇರಿದ ಸುಮಾರು 40 ಎಕರೆಯ ಎರಡು ಹುಲ್ಲಿನ ಬಣವೆಗಳಿಗೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿ ತಗುಲಿದೆ. ಅಗ್ನಿ ಅವಘಡದಿಂದ ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಗಂಗಾವತಿಯ ಅಗ್ನಿ ಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಮತ್ತೂಂದು ಘಟನೆಯಲ್ಲಿ ಶ್ರೀರಾಮರಂಗಾಪುರ ಗ್ರಾಮದಲ್ಲಿ ಹನುಮಂತಪ್ಪ ಎಂಬುವರಿಗೆ ಸೇರಿದ ಬಣವೆಗೆ ಬೆಂಕಿ ಬಿದ್ದು ಭಸ್ಮವಾಗಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next