Advertisement

ನೀಲಗಿರಿ ಅರಣ್ಯಕ್ಕೆ ಬೆಂಕಿ : ಬೆಂಕಿ ನಂದಿಸಲು ಹರಸಾಹಸ

05:15 PM Feb 28, 2023 | Team Udayavani |

ಚಿಕ್ಕಮಗಳೂರು :ನೀಲಗಿರಿ ಅರಣ್ಯಕ್ಕೆ ಬೆಂಕಿ ಬಿದ್ದದ್ದರಿಂದ ನಿಲಗೀರಿ ಪ್ಲಾಂಟೇಷನ್ ಧಗ-ಧಗ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ತಾಲೂಕಿನ ಸಗನಿಪುರ ಗ್ರಾಮದ ಬಳಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಅರಣ್ಯದಲ್ಲಿದ್ದ ಅತ್ಯಮೂಲ್ಯ ಸಸ್ಯ, ನೀಲಗಿರಿ ಮರಗಳು ಸುಟ್ಟು ಕರಕಲಾಗಿದೆ.

Advertisement

ನೀಲಗಿರಿ ಅರಣ್ಯಕ್ಕೆ ಬೆಂಕಿ ಬಿದ್ದಿರುವುರ ಹಿಂದೆ ಕಿಡಿಗೇಡಿಗಳ ಕೃತ್ಯವಿದೆ ಎಂದು ಗ್ರಾಮಸ್ಥರು ಅಂದಾಜಿಸಿದ್ದಾರೆ. ಗಾಳಿ ಹಾಗೂ ಬಿಸಿಲಿನ ತಾಪಕ್ಕೆ ಬೆಂಕಿಯ ಜ್ವಾಲೆ ಮತ್ತಷ್ಟು ಹೆಚ್ಚಾಗಿ ಸುಮಾರು ಅರ್ಧ ಕಿ.ಮೀ. ವರೆಗೂ ಹೊಗೆ ಆವರಿಸಿದ್ದು, ತೀವ್ರವಾಗಿ ಹಬ್ಬುತ್ತಿದ್ದ ಬೆಂಕಿಯನ್ನು ನಂದಿಸಲು ಅರಣ್ಯ ಸಿಬ್ಬಂದಿಗಳು ಹರಸಾಹಸಪಟ್ಟರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ :ಚಿಕ್ಕಮಗಳೂರು: ಪ್ಲಾಸ್ಟಿಕ್ ಸೇವಿಸಿ ಎರಡು ಹಸುಗಳು ಸಾವು

Advertisement

Udayavani is now on Telegram. Click here to join our channel and stay updated with the latest news.

Next