Advertisement

ಮಾನ್ವಿಯ ಅಗರಬತ್ತಿ ಅಂಗಡಿಯಲ್ಲಿ ಅಗ್ನಿ ಅವಘಡ: ಅಪಾರ ನಷ್ಟ

08:55 AM Nov 26, 2021 | Team Udayavani |

ಮಾನ್ವಿ: ಪಟ್ಟಣದ ಪಂಪಾ ಕಾಂಪ್ಲೆಕ್ಸ್ ನಲ್ಲಿನ ಶ್ರೀ ಸಾಯಿ ಅಗರಬತ್ತಿ ಅಂಗಡಿಯಲ್ಲಿ ಗುರುವಾರ ರಾತ್ರಿ ಆಕಸ್ಮಿಕ ಬೆಂಕಿ ಸಂಭವಿಸಿ ಅಪಾರ ಪ್ರಮಾಣದ ನಷ್ಟವಾಗಿದೆ.

Advertisement

ಬೆಂಕಿ ಕೆನ್ನಾಲಿಗೆ ಸುತ್ತಲೂ ಹರಡಿದ ಪರಿಣಾಮ ಭಾರೀ ಆತಂಕ ಎದುರಾಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಅಕ್ಕಪಕ್ಕದ ವಾಣಿಜ್ಯ ಮಳಿಗೆಗಳಿಗೆ ಬೆಂಕಿ ವ್ಯಾಪಿಸದಂತೆ ರಾತ್ರಿಯಿಡಿ ಶ್ರಮಿಸಿದ್ದು, ಭಾರೀ ಅನಾಹುತ ತಪ್ಪಿಸಿದ್ದಾರೆ.

ಇದನ್ನೂ ಓದಿ:ಉಡುಪಿಗೆ ಬರುವ ಪ್ರವಾಸಿಗರಿಗೆ ಗುಡ್ ನ್ಯೂಸ್: “ವರ್ಚುವಲ್‌ ಟೂರ್‌’ ವಿನೂತನ ಪರಿಕಲ್ಪನೆ

ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ಹಾಜಿ ಮಿಯಾ ನೇತೃತ್ವದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಇಡೀ ರಾತ್ರಿ ಕೆಲಸ ಮಾಡಿದೆ. ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಬೇರೆ ಅಂಗಡಿಗಳಿಗೆ ಯಾವುದೇ ಹಾನಿಯಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next