Advertisement

ಕುರುಗೋಡು: ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾದ ಮನೆ

05:44 PM Feb 22, 2022 | Team Udayavani |

ಕುರುಗೋಡು: ಆಕಸ್ಮಿಕ ಬೆಂಕಿಯಿಂದ ಗುಡಿಸಲು ಮನೆಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಸಮೀಪದ ಹಾವಿನಹಾಳು ಗ್ರಾಮದಲ್ಲಿ ಜರುಗಿದೆ.

Advertisement

ಗುಡಿಸಲು ಭಸ್ಮವಾಗಿರುವುದು ಹಾವಿನಹಾಳು ಗ್ರಾಮದ ಸುಭಾಷನದು ಎಂದು ತಿಳಿದು ಬಂದಿದೆ. ಹಗಲಿನ ಸಮಯ ಆಗಿದ್ದರಿಂದ ಮಕ್ಕಳು ಶಾಲೆಗೆ ತೆರಳಿದ್ದರು, ಮತ್ತು ಮನೆಯವರು ಕೆಲಸದ ನಿಮ್ಮಿತ್ತ ಹೊರಗಡೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಈ ಅವಘಡ ಸಂಭವಿಸಿದೆ.

ಮನೆಯಲ್ಲಿ ಇದ್ದ ದವಸ ದಾನ್ಯಗಳು ಹಾಗೂ ಉಡುಗೆ ತೋಡುಗೆಗಳು ಸುಟ್ಟು ಭಸ್ಮ ವಾಗಿವೆ. ಯಾವುದೇ ಪ್ರಾಣಹಾನಿ ಆಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಗ್ರಾಪಂ ಆಡಳಿತ ಭೇಟಿ ನೀಡಿ ಪ್ರಾಥಮಿಕ ವರದಿಯನ್ನು ಸಂಗ್ರಹಿಸಿದ್ದಾರೆ.

ಸುದ್ದಿ ತಿಳಿದಕ್ಷಣ ಶಾಸಕರ ಪುತ್ರ ಎಂ. ಎಸ್. ಸಣ್ಣ ಸಿದ್ದಪ್ಪ ಭೇಟಿ ನೀಡಿ ಸಂತ್ರಸ್ತರಿಗೆ ಆಹಾರ ದಾನ್ಯ, ಬಟ್ಟೆ ಮತ್ತಿತರೆ ಅಗತ್ಯ ವಸ್ತುಗಳನ್ನು ತಮ್ಮ ಸ್ವಂತ ನೆರೆವೆನಿಂದ ವಿತರಿಸಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಅಲ್ಲದೆ ತಾಲೂಕು ಆಡಳಿತದಿಂದ ದೊರೆಯುವ ಸಹಾಯ ದನವನ್ನು ಕೊಡಿಸುವುದಾಗಿ ಹಾಗೂ ಗ್ರಾಪಂ ಯಿಂದ ಮನೆಯನ್ನು ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಬಿಜೆಪಿ ಮುಖಂಡರು ಸೇರಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next