Advertisement

ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ವೇಳೆ ಎಸಿಯಲ್ಲಿ ಬೆಂಕಿ

03:04 PM Jun 07, 2020 | keerthan |

ಕಲಬುರಗಿ: ಶಿಕ್ಷಣ ಸಚಿವ ಸುರೇಶಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆ ವೇಳೆ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣ ಕಾಲ ಆತಂಕ ಹುಟ್ಟಿಸಿದ ಘಟನೆ ರವಿವಾರ ನಡೆಯಿತು.

Advertisement

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆಯ ಆರಂಭದಲ್ಲೇ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿತು. ಇದರಿಂದ ಸಚಿವರು ಮತ್ತು ಅಧಿಕಾರಿಗಳು ಗಾಬರಿಗೊಂಡರು. ತಕ್ಷಣವೇ ಅಧಿಕಾರಿಯೊಬ್ಬರು ಎದ್ದು ಪವರ್ ಆಫ್ ಮಾಡಿದರು.

ಹೀಗಾಗಿ ಯಾವುದೇ ರೀತಿಯ ಹೆಚ್ಚಿನ ಅವಘಡ ಸಂಭವಿಸಲಿಲ್ಲ. ಹತ್ತು ನಿಮಿಷಗಳನ್ನು ನಂತರ ಸಚಿವರು ಸಭೆಯನ್ನು ಮುಂದುವರೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next