Advertisement

ಬೆಂಕಿ ನಂದಿಸುವ ಅಣಕು ಕಾರ್ಯಾಚರಣೆ

12:54 PM Jul 10, 2018 | |

ಮಹಾನಗರ : ಸುರತ್ಕಲ್‌ನ ಕಾನಾ, ಬಾಳ ಎಂಬಲ್ಲಿ ಶ್ರೀ ಆದಿನಾಥೇಶ್ವರ ಪಾರ್ಕಿಂಗ್‌ ಯಾರ್ಡ್‌ನಲ್ಲಿ ಸೋಮವಾರ
ಅಗ್ನಿ ನಂದಿಸುವ ಅಣಕು ಕಾರ್ಯಾಚರಣೆ ನಡೆಯಿತು. ಶ್ರೀ ಆದಿನಾಥೇಶ್ವ ಪಾರ್ಕಿಂಗ್‌ ಏರ್ಪೊರ್ಟ್‌ (ಏಟಿಎಫ್‌) ತೈಲ ಸಾಗಾಟದ ಟ್ಯಾಂಕರ್‌ ಒಂದು ಅಗ್ನಿ ಅವಘಡಕ್ಕೆ ಒಳಗಾದಾಗ, ರಾಜ್ಯ ಅಗ್ನಿಶಾಮಕ ದಳ, ಟ್ರಾಫಿಕ್‌ ಪೊಲೀಸ್‌ ತಂಡ ಕ್ಲಪ್ತ ಸಮಯದಲ್ಲಿ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅನಂತರ ಡಿಸ್ಟ್ರಿಕ್ಟ್ ಫೈರ್‌ ಆಫೀಸರ್‌ ಮಹಮ್ಮದ್‌ ಝುಲ್ವೀಕರ್‌ ನವಾಜ್‌ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು. ಟ್ರಾಫಿಕ್‌ ಪೊಲೀಸ್‌ ಎಸ್‌ಐ ಯೋಗೀಶ್‌ ರಸ್ತೆ ಸುರಕ್ಷತೆಯ ಮಾಹಿತಿ ನೀಡಿದರು.

Advertisement

ಶೆಲ್‌ ಎಂಆರ್‌ಪಿಎಲ್‌ ಮ್ಯಾನೇಜರ್‌ ರಾಮಚಂದ್ರ ಮೂರ್ತಿ, ಸೇಫ್ಟಿ  ಮ್ಯಾನೇಜರ್‌ ಶ್ರೀನಿವಾಸ್‌ ಕುಳಾಯಿ ಹಾಗೂ ಶ್ರೀಆದಿನಾಥೇಶ್ವರ ರೋಡ್‌ ಲೈನ್ಸ್‌ ಮಾಲಕ ಸುಜಿತ್‌ ಆಳ್ವ, ಹೆಡ್‌ ಕಾನ್ಸ್‌ಟೆಬಲ್‌ ಹರೀಶ್‌ ಕುಮಾರ್‌, ಅಸಿಸ್ಟಂಟ್‌ ಸ್ಟೇಷನ್‌ ಆಫೀಸರ್‌ ಅಬ್ದುಲ್‌ ಹಮೀದ್‌ , ರವೀಂದ್ರ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಆದಿನಾಥೇಶ್ವರ ಸೇಫ್ಟಿ ಮ್ಯಾನೇಜರ್‌ ದೀಕ್ಷಿತ್‌ ಕುಮಾರ್‌ ನಿರ್ವಹಿಸಿದರು. ಕಂಪೆನಿ ಬ್ರಾಂಚ್‌ ಮ್ಯಾನೇಜರ್‌ ರಾಜೇಶ್‌ ಜಿ. ಕೊಟ್ಟಾರಿ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next