Advertisement

ಮಾರ್ಜಾಲಕ್ಕೆ ಜೀವದಾನ ಮಾಡಿ ಮಾನವೀಯತೆ ಮೆರೆದ ಉಡುಪಿ ಅಗ್ನಿಶಾಮಕ ದಳ

11:19 AM Dec 06, 2020 | keerthan |

ಉಡುಪಿ: ಇಲ್ಲಿನ ತೆಂಕಪೇಟೆಯ ವಸತಿ ಸಂಕೀರ್ಣದ ಕಿಟಕಿಯ ಲಿಂಟಾಲ್ ಮೇಲೆ ಸಿಕ್ಕಿ ಬಿದ್ದಿದ್ದ ಸಾಕು ಬೆಕ್ಕೊಂದನ್ನು ಆದಿತ್ಯವಾರ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಕಾಲದಲ್ಲಿ ಆಗಮಿಸಿ ರಕ್ಷಿಸಿದರು.

Advertisement

ಮಾನವರು ಹೋಗಲು ಸಾಧ್ಯವಾಗದ ಸ್ಥಳದಲ್ಲಿದ್ದ ಬೆಕ್ಕು ಆಯತಪ್ಪಿ ಕೆಳಗೆ ಬಿದ್ದಿದ್ದರೆ ಜೀವಕಳೆದು ಕೊಳ್ಳುತ್ತಿತ್ತು. ಎತ್ತರದ ಏಣಿ ಹಾಕಿಕೊಂಡು ಮೇಲೆ ಏರಿದ ಸಿಬ್ಬಂದಿ ಅದನ್ನು ಓಡಿಸಲು ಪ್ರಯತ್ನಿಸಿದರು.

ಇದನ್ನೂ ಓದಿ:ಕಾರ್ ನ ಬ್ರೇಕ್ ವೈಫಲ್ಯ: ಬುರಾರಿ ಮೇಲ್ಸೇತುವೆಯಲ್ಲಿ ಪರಸ್ಪರ ಢಿಕ್ಕಿಯಾದ ಏಳು ವಾಹನಗಳು!

ಅದು ಕೆಳಗೆ ಹಾರಿಬಿದ್ದರೂ ಪ್ರಾಣಾಪಾಯವಾಗದಂತೆ ಕೆಳಗೆ ಬಲೆಹಾಕಲಾಗಿತ್ತು. ಮೇಲಿಂದ ಓಡಿಸುತ್ತಿದ್ದಂತೆ ಛಂಗನೆ ಕೆಳಗೆ ಹಾರಿದ ಬೆಕ್ಕು ಅಗ್ನಿಶಾಮಕ ಸಿಬಂದಿಯ ಭುಜದ ಮೇಲೆ ಬಿದ್ದು ಓಡಿಹೋಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next