Advertisement

ಕರಾಡದೊಡ್ಡಿ-ಭೂತನಾಳ ಮಾನವ ನಿರ್ಮಿತ ಅರಣ್ಯಕ್ಕೆ ಕೊಳ್ಳಿಯಿಟ್ಟ ಕಿಡಿಗೇಡಿಗಳು

09:35 AM Oct 04, 2021 | Team Udayavani |

ವಿಜಯಪುರ: ನಗರಕ್ಕೆ ಹೊಂದಿಕೊಂಡಿರುವ ಕರಾಡದೊಡ್ಡಿ, ಭೂತನಾಳ ಪರಿಸರದ ಮಾನವ ನಿರ್ಮಿತ ಅರಣ್ಯಕ್ಕೆ ಕಿಡಿಗೇಡಿಗಳು ಭಾನುವಾರ ರಾತ್ರಿ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

Advertisement

ಜಿಲ್ಲೆಯಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ಆರಂಭಿಸಿದ್ದ ಕೋಟಿ ವೃಕ್ಷ ಅಭಿಯಾನದ ಫಲವಾಗಿ ಸುಮಾರು 5 ಎಕರೆ ಬಂಜರು‌ ಪ್ರದೇಶದಲ್ಲಿ ಅರಣ್ಯ ನಿರ್ಮಿಸಲಾಗಿದೆ.

ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ಕೃಷ್ಣಾ ಭಾಗ್ಯ ಜಲ ನಿಗಮದ ಅನುದಾನದ ನೆರವಿನಿಂದ ಮಾನವ ನಿರ್ಮಿತ ಅರಣ್ಯ ಸೃಷ್ಟಿಗೆ ಮುಂದಾಗಿದ್ದರು. ಇದೀಗ ಸಸಿಗಳು ಗಿಡ-ಮರಗಳಾಗಿ ಬೆಳೆದಿದ್ದು, ಸುಂದರ ಪರಸರ ನಿರ್ಮಿಸಿದೆ.

ಇದನ್ನೂ ಓದಿ:ಲಖೀಂಪುರ ಖೇರಿ ಘರ್ಷಣೆ: ಪ್ರಿಯಾಂಕಾ ಗಾಂಧಿ ಭೇಟಿ, ಪೊಲೀಸರೊಂದಿಗೆ ವಾಗ್ವಾದ, ಗೃಹ ಬಂಧನ

ಹೀಗಾಗಿ ಐತಿಹಾಸಿಕ ಸ್ಮಾರಕಗಳ ನಗರಿ ವಿಜಯಪುರ ನೈಸರ್ಗಿಕ ಸೋಬಗು ನೋಡಲು ಸಾಧ್ಯವಾಗಿದೆ. ಈ ಪರಿಸರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಸೃಷ್ಟಿಯ ಸೊಬಗು ಸವಿಯಲು ಬಿದಿರು, ಕಟ್ಟಿಗೆಯ ಕಾವಲು-ವೀಕ್ಷಣಾ ಗೋಪುರ ನಿರ್ಮಿಸಿದ್ದು, ಈ ಕಾಷ್ಠ ಗೋಪುರಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

Advertisement

ಬೆಂಕಿ ಕಾಣಿಸಿಕೊಳ್ಳುತ್ತಲೇ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next