Advertisement

ಭಟಿಂಡಾ: ಸೇನೆಯ ಮದ್ದುಗುಂಡು ಗೋದಾಮಿಗೆ ಬೆಂಕಿ; ಜೀವ ಹಾನಿ ಇಲ್ಲ

10:56 AM Sep 07, 2017 | Team Udayavani |

ಚಂಡೀಗಢ : ಪಂಜಾಬಿನ ಭಟಿಂಡಾ ಜಿಲ್ಲೆಯಲ್ಲಿನ ಸೇನೆಯ ಮದ್ದು ಗುಂಡು ದಾಸ್ತಾನು ಇರುವ ಗೋದಾಮಿನಲ್ಲಿ ಇಂದು ಗುರುವಾರ ನಸುಕಿನ ವೇಳೆ ಬೆಂಕಿ ಆಕಸ್ಮಿಕ ಉಂಟಾಗಿರುವುದಾಗಿ ವರದಿಯಾಗಿದೆ. 

Advertisement

ಬೆಂಕಿ ಅವಘಡದಲ್ಲಿ ಯಾವುದೇ ಜೀವ ಹಾನಿ ಉಂಟಾಗಿಲ್ಲ ಎಂದು ವರದಿಗಳು ತಿಳಿಸಿವೆ. 

ಸೇನೆಯ ಮದ್ದು ಗುಂಡು ಗೋದಾಮಿನಲ್ಲಿ  ಬೆಳಗ್ಗೆ 5.10ರ ವೇಳೆಗೆ ಕಾಣಿಸಿಕೊಂಡ ಬೆಂಕಿಯನ್ನು 6.30ರ ಒಳಗಾಗಿ ನಿಯಂತ್ರಿಸಲಾಯಿತು ಎಂದು ಭಟಿಂಡಾ ಡೆಪ್ಯುಟಿ ಕಮಿಷನರ್‌ ದಿಪ್ರಾವಾ ಲಾಕ್ರಾ ತಿಳಿಸಿದ್ದಾರೆ. 

ಬೆಂಕಿಯಿಂದಾಗಿ ಮದ್ದು ಗುಂಡು ಸಂಗ್ರಹಕ್ಕೆ ಆಗಿರುವ ನಾಶ ನಷ್ಟವನ್ನು ಈಗಿನ್ನು ಅಂದಾಜಿಸಬೇಕಾಗಿದೆ ಎಂದವರು ಹೇಳಿದರು. ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಈ ಬೆಂಕಿ ಅವಘಡಕ್ಕೆ ಕಾರಣ ಇದ್ದಿರಬಹುದೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next