Advertisement

ಶಹಾಪುರ: ಅಂಗಡಿಗಳಿಗೆ ಆಕಸ್ಮಿಕ ಬೆಂಕಿ;‌ ಅಪಾರ ನಷ್ಟ

09:00 AM Jan 12, 2023 | Team Udayavani |

ಶಹಾಪುರ: ನಗರದ ಗ್ಯಾರೇಜ್ ಲೈನ್ ನ ನಾಲ್ಕೈದು ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದು ಅಪಾರ ನಷ್ಟವಾದ ಘಟನೆ ಜ.11ರ ರಾತ್ರಿ ನಡೆದಿದೆ.

Advertisement

ಗ್ಯಾರೇಜ್ ಲೈನ್ ವೀರ ಭೂಮಿಪುತ್ರ ಏಜೆನ್ಸಿಯ ಅಂಗಡಿಯಲ್ಲಿ ಮೊದಲು ಬೆಂಕಿ ಹೊತ್ತಿದ್ದು, ಈ ಅಂಗಡಿಯ ಹಿಂಬದಿಯ ಆರ್ಟ್ಸ್ ಮತ್ತು ಫರ್ನಿಚರ್ ಅಂಗಡಿಗೂ ಬೆಂಕಿ ಮುನ್ನಾಲೆ ಚಾಚಿಕೊಂಡಿದ್ದು, ಒಟ್ಟು ನಾಲ್ಕೈದು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.

ವೀರ ಭೂಮಿ ಪುತ್ರ ಎಜೆನ್ಸಿ ಅಂಗಡಿಯೊಳಗಿನ ಕೃಷಿ ಪರಿಕರಗಳು ಸುಟ್ಟು ಕರಕಲಾಗಿವೆ‌. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ‌‌ ಆಗಮಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದು,‌ ಪ್ರಕರಣ ದಾಖಲಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next