Advertisement

ಮೆಟ್ರೋ ಪಿಲ್ಲರ್ ಕುಸಿತ ದುರಂತ ಪ್ರಕರಣ: 8 ಮಂದಿ ವಿರುದ್ಧ ಎಫ್ಐಆರ್‌

11:44 PM Jan 11, 2023 | Team Udayavani |

ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಕಬ್ಬಿಣ ರಾಡ್‌ಗಳು ಬಿದ್ದು ತಾಯಿ-ಮಗ ಮೃತಪಟ್ಟ ಪ್ರಕರಣ ಸಂಬಂಧ ಗೋವಿಂದಪುರ ಠಾಣೆ ಪೊಲೀಸರು 8 ಮಂದಿ ವಿರುದ್ಧ ಎಫ್ಐಆರ್‌ ದಾಖಲಿಸಿದ್ದು, ನೋಟಿಸ್‌ ಕೊಟ್ಟು ವಿಚಾರಣೆ ನಡೆಸುತ್ತಿದ್ದಾರೆ.

Advertisement

ನಿರ್ಮಾಣದ ಹೊಣೆ ಹೊತ್ತಿದ್ದ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪೆನಿ(ಎನ್‌ಸಿಸಿ), ಈ ಸಂಸ್ಥೆಯ ಕಿರಿಯ ಎಂಜಿನಿಯರ್‌ ಪ್ರಭಾಕರ್‌, ನಿರ್ದೇಶಕ ಚೈತನ್ಯ, ಸ್ಪೆಷನ್‌ ಪ್ರಾಜೆಕ್ಟ್ ಮ್ಯಾನೇಜರ್‌ ಮಥಾಯ್‌, ಪ್ರಾಜೆಕ್ಟ್ ಮ್ಯಾನೇಜರ್‌ ವಿಕಾಸ್‌ ಸಿಂಗ್‌, ಮೇಲುಸ್ತುವಾರಿ ಲಕ್ಷ್ಮಿಪತಿ, ಬಿಎಂಆರ್‌ಸಿಎಲ್‌ನ ಉಪಮುಖ್ಯ ಎಂಜಿನಿಯರ್‌ ವೆಂಕಟೇಶ್‌ ಶೆಟ್ಟಿ ಹಾಗೂ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಮಹೇಶ್‌ ಬೆಂಡೆಕೇರಿ, ಬಿಎಂಆ ರ್‌ ಸಿಎಲ್‌ನ ಜೆಇ ಜಾಪರ್‌ ಸಾದಿಖ್‌ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಾತನಾಡಿದ ಡಿಸಿಪಿ ಭೀಮಾಶಂಕರ್‌ ಗುಳೇದ್‌, ಮೃತ ತೇಜಸ್ವಿನಿ ಪತಿ ಲೋಹಿತ್‌ ದೂರಿನನ್ವಯ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೊದಲು ಯಾರ ಹೆಸರನ್ನು ಉಲ್ಲೇಖೀಸಿರಲಿಲ್ಲ. ಈಗ ಬಿಎಂಆರ್‌ಸಿಎಲ್‌ನಿಂದ ಕಾಮಗಾರಿ ಹೊಣೆ ಹೊತ್ತಿದ್ದ ಸಂಸ್ಥೆ ಹಾಗೂ ಅದರ ಅಧಿಕಾರಿ ಗಳ ಹೆಸರು ಪಡೆದು ಕೇಸ್‌ ದಾಖಲಿಸಲಾಗಿದೆ. ಮತ್ತೂಂದೆಡೆ ಎಲ್ಲ ಎಂಟು ಮಂದಿ ಅಧಿಕಾರಿಗಳಿಗೆ ನೋಟಿಸ್‌ ಕೊಟ್ಟ ವಿಚಾರಣೆ ಕರೆಯಲಾಗಿದ್ದು, ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.

ಅಮಾನತು
ಮತ್ತೊಂದೆಡೆ ಘಟನೆಗೆ ಸಂಬಂಧಿಸಿದಂತೆ ಬಿಎಂಆರ್‌ ಸಿಎಲ್‌ನ ಪ್ರಬಾರಿ ಉಪ ಮುಖ್ಯ ಎಂಜಿನಿಯರ್‌, ಕಾರ್ಯ ನಿರ್ವಾಹಕ ಎಂಜಿ ನಿಯರ್‌ ಮತ್ತು ಸೈಟ್‌ ಎಂಜಿನಿಯರ್‌ ಅವರನ್ನು ಬಿಎಂಆರ್‌ ಸಿ ಎಲ್‌ ಅಮಾನತು ಗೊಳಿಸಿ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next