Advertisement

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

08:34 PM Sep 19, 2021 | Team Udayavani |

ಪಾಟ್ನಾ: 2019ರ ಸಂಸತ್‌ ಚುನಾವಣೆ ಸ್ಪರ್ಧೆಗೆ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಿಂದ 5 ಕೋಟಿ ರೂ. ಹಣ ಸ್ವೀಕರಿಸಿದ ಆರೋಪವೀಗ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಮುಳುವಾಗಿದೆ.

Advertisement

ತೇಜಸ್ವಿ ಸೇರಿದಂತೆ ಐವರ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಪಾಟ್ನಾದ ಸಿವಿಲ್‌ ಕೋರ್ಟ್‌ ನಿರ್ದೇಶನ ನೀಡಿದೆ.

ಕಾಂಗ್ರೆಸ್‌ ಮುಖಂಡ ಸಂಜೀವ್‌ ಕುಮಾರ್‌ ಸಿಂಗ್‌ ನೀಡಿದ ದೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮದನ್‌ ಮೋಹನ್‌ ಝಾ, ವಕ್ತಾರ ರಾಜೇಶ್‌ ರಾಥೋಡ್‌, ಮುಖಂಡ ಶುಭಾನಂದ ಮುಕೇಶ್‌ ಸೇರಿದಂತೆ ಆರ್‌ಜೆಡಿ ನಾಯಕ ತೇಜಸ್ವಿಯ ಹೆಸರೂ ಸೇರಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ- ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು.

ಇದನ್ನೂ ಓದಿ:ಕಾಗಿನೆಲೆ ಗ್ರಾಪಂ ಅಧ್ಯಕ್ಷೆ ಗುತ್ತೆವ್ವ ಗುಡಿಸಲಿಗೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next