Advertisement

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಾಲೇಜು ಅಧ್ಯಕ್ಷ,ಪ್ರಾಂಶುಪಾಲರ ಮೇಲೆ ಎಫ್ಐಆರ್

05:20 PM Aug 17, 2022 | Team Udayavani |

ಧಾರವಾಡ: ಪಿಯು ವಿಜ್ಞಾನ ಕಾಲೇಜಿನ ಅಧ್ಯಕ್ಷನೇ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಇಲ್ಲಿಯ ಸಪ್ತಾಪುರದ ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜಿನ ಅಧ್ಯಕ್ಷ ಬಸವರಾಜ ಯಡವಣ್ಣವರ ಎಂಬಾತನೇ ಈ ಹೀನ ಕೃತ್ಯ ಎಸಗಿದ್ದು, ಇದಕ್ಕೆ ಕಾಲೇಜಿನ ಪ್ರಾಂಶುಪಾಲ ಮಹಾದೇವ ಕುರವತ್ತಿಗೌಡರ ಪ್ರಚೋದನೆ ನೀಡಿರುವ ಆರೋಪವಿದೆ. ಈ ಕೃತ್ಯದಿಂದ ನೊಂದಿರುವ ಬೆಳಗಾವಿ ಮೂಲದ ಅಪ್ರಾಪ್ತ ವಿದ್ಯಾರ್ಥಿನಿಯ ದೂರಿನ ಅನ್ವಯ, ಕಾಲೇಜು ಅಧ್ಯಕ್ಷ ಹಾಗೂ ಪ್ರಾಂಶುಪಾಲರ ವಿರುದ್ದ ಉಪನಗರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.

ದಾಂಡೇಲಿನಲ್ಲಿ ದೌರ್ಜನ್ಯ : ಈ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ಈ ವಿದ್ಯಾರ್ಥಿನಿಯ ಜತೆಗೆ ಬೇರೆ ವಿದ್ಯಾರ್ಥಿನಿಯನ್ನೂ ಸಹ ತರಗತಿ ಆರಂಭಕ್ಕೂ ಒಂದು ವಾರದ ಮುಂಚೆಯೇ ಕರೆಸಿದ್ದು, ಇದಾದ ಬಳಿಕ ವಿಜಯನಗರದಲ್ಲಿ ಇರುವ ಕಾಲೇಜಿನ ವಸತಿ ನಿಲಯಕ್ಕೆ ಕಾಲೇಜಿನ ಅಧ್ಯಕ್ಷರೇ ಕಾರಿನಲ್ಲಿ ಕರೆದುಕೊಂಡು ಹೋಗಿದಲ್ಲದೇ ಮೈಕೈ ಮುಟ್ಟುವುದು ಸೇರಿದಂತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಸಣ್ಣಪುಟ್ಟ ವಿಷಯಕ್ಕೆ ವಿದ್ಯಾರ್ಥಿನಿಯರಿಗೆ ಅಧ್ಯಕ್ಷರನ್ನು ಭೇಟಿಯಾಗುವಂತೆ ಹೇಳುತ್ತಿದ್ದ ಪ್ರಾಂಶುಪಾಲರು ಈ ಕೃತ್ಯಕ್ಕೆ ಪ್ರಚೋದನೆ ನೀಡಿದ್ದಾರೆ. ಇದಾದ ಬಳಿಕ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಇಬ್ಬರು ವಿದ್ಯಾರ್ಥಿನಿಯರನ್ನು ದಾಂಡೇಲಿ ಬಸ್ ನಿಲ್ದಾಣದ ಎದುರಿನ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾರೆ. ಇದಲ್ಲದೇ ಬಾಲಕಿಯರಿಗೆ ಊಟ ಮಾಡಿಸಿದ್ದು, ಅಲ್ಲದೇ ಅಸಭ್ಯವಾಗಿ ಲೈಂಗಿಕತೆಯ ಬಗ್ಗೆ ಪ್ರಚೋದಿಸಿದ್ದಾರೆ.

ಈ ಬಳಿಕವೂ ಮತ್ತೆ ವಿದ್ಯಾರ್ಥಿನಿಯೊಬ್ಬಳನ್ನೇ ಪುಸಲಾಯಿಸಿದ ಕಾಲೇಜಿನ ಅಧ್ಯಕ್ಷರು, ಮತ್ತೆ ದಾಂಡೇಲಿಯ ಅದೇ ಲಾಡ್ಜ್ ಗೆ ಕೆರೆದುಕೊಂಡು ಹೋಗಿದ್ದಾರೆ. ಅಲ್ಲಿ ಜ್ಯೂಸ್ ಅಂತ ಹೇಳಿ ಬಿಯರ್‌ನ್ನು ಕುಡಿಸಿದ್ದು, ಆ ಬಳಿಕ ನಿದ್ರೆಗೆ ಜಾರಿದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಲಾಗಿದೆ. ಇದಲ್ಲದೇ ನಿರಂತರವಾಗಿ ಅಸಭ್ಯವಾಗಿ ನಡೆದುಕೊಳ್ಳುತ್ತಾ ಬಂದಿದ್ದು, ಈ ಬಗ್ಗೆ ನೊಂದ ವಿದ್ಯಾರ್ಥಿನಿಯು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಸದ್ಯ ಪೋಕ್ಸೋಯಡಿ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿಗಳಿಬ್ಬರು ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next