Advertisement

ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಬಹುದೊಡ್ಡ ಸವಾಲು

11:38 PM Mar 11, 2020 | mahesh |

ಯಾವುದೇ ಸ್ಥಳೀಯ ಸಂಸ್ಥೆ ಅಭಿವೃದ್ಧಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಣಕಾಸಿನ ವ್ಯವಸ್ಥೆ ಅಗತ್ಯ. ಜನರು ನೀಡಬೇಕಿರುವ ತೆರಿಗೆಗಳನ್ನು ನೀಡಿದರಷ್ಟೇ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಅದೇ ರೀತಿ ತೆರಿಗೆ ವಸೂಲಿಗೆ ಆಡಳಿತ ಕೂಡ ಕ್ರಮ ಕೈಗೊಳ್ಳುವುದು ಅಗತ್ಯ. ಎಲ್ಲರೂ ಸಕಾಲದಲ್ಲಿ ತೆರಿಗೆ ಪಾವತಿಸಿದಲ್ಲಿ ಅಭಿವೃದ್ಧಿಯ ದಾಪುಗಾಲು ಇಡುವುದು ಸುಲಭ.

Advertisement

ಮಹಾನಗರ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡು ಉತ್ತಮ ಆಡಳಿತ ನೀಡಲು ಆರ್ಥಿಕ ಸಂಪನ್ಮೂಲ ಅವಶ್ಯ. ಇದೇ ಹೊಸ ಆಡಳಿತಕ್ಕೆ ಇರುವ ಪ್ರಮುಖ ಸವಾಲು. ಆಸ್ತಿ ತೆರಿಗೆ, ಜಾಹೀರಾತು ತೆರಿಗೆ, ವಾಣಿಜ್ಯ ಕಟ್ಟಡಗಳ ಬಾಡಿಗೆ, ಪಾರ್ಕಿಂಗ್‌ ಶುಲ್ಕ, ನೀರಿನ ಶುಲ್ಕ- ಇವುಗಳು ಪಾಲಿ ಕೆಯ ಪ್ರಮುಖ ಆದಾಯ ಮೂಲ ಗಳು. ಇವುಗಳಿಂದ ಬರಬೇಕಾದ ಶುಲ್ಕ ಸಮರ್ಪಕವಾಗಿ ವಸೂಲಾದರೆ ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ಕೊರತೆಯಾಗು ವುದಿಲ್ಲ. ವಾಸ್ತವದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈಗ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ.

ಕಂದಾಯ ತೆರಿಗೆಯನ್ನೇ ತೆಗೆದು ಕೊಳ್ಳೋಣ. ಈ ವರ್ಷ ಸಂಗ್ರಹದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡುಬಂದಿದೆ. ಆಸ್ತಿ ತೆರಿಗೆ ಸಹಿತ ವಿವಿಧ ಮೂಲಗಳಿಂದ ವಾರ್ಷಿಕ ಒಟ್ಟು 97.52 ಕೋ.ರೂ. ಆದಾಯ ಬರಬೇಕಿತ್ತು. ಆದರೆ ಜನವರಿ ವೇಳೆಗೆ 42.18 ಕೋ.ರೂ. ಮಾತ್ರ ವಸೂಲಾಗಿದೆ. ಅಂದರೆ, ಶೇ.43.83ರಷ್ಟು ಕಂದಾಯ ವಸೂಲಾತಿಯಾಗಿದೆ. ಪ್ರಮುಖ ಆದಾ ಯಕ್ಕೇ ಹೊಡೆತ ಬಿದ್ದಿರುವುದು ಗಮನಿ ಸಿದರೆ, ಮುಂದಿನ ಆರ್ಥಿಕ ವರ್ಷದಲ್ಲಿ ಸಂಪನ್ಮೂಲಗಳ ಕ್ರೋಡೀ ಕರಣವೇ ದೊಡ್ಡ ಸವಾಲು. ಅದರಲ್ಲೂ ಆದ್ಯತಾ ವಲಯಗಳಿಗೆ ಹಣಕಾಸು ಹೊಂದಿ ಸು ವುದು ಹಾಗೂ ದೈನಂದಿನ ಖರ್ಚು- ವೆಚ್ಚಗಳನ್ನು ನಿಭಾಯಿ ಸುವುದು ಆಡಳಿತ ನಡೆಸುವವರಿಗೆ ಸವಾಲಾಗಿ ಪರಿಣಮಿಸುವ ಸಂಭವವೇ ಹೆಚ್ಚು.

ಕಳೆದ ವರ್ಷ ಆಸ್ತಿ ತೆರಿಗೆ ಕೇವಲ ಶೇ.41.12ರಷ್ಟು ಮಾತ್ರ ಸಂಗ್ರಹವಾಗಿತ್ತು. ಹಾಗಾಗಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ನೋಟಿಸ್‌ ಜಾರಿ ಮಾಡಿತ್ತು. ಇದರ ಫಲವೆಂಬಂತೆ ಫೆಬ್ರವರಿ ತಿಂಗಳಿನಲ್ಲಿ 11.67 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಈ ವರ್ಷ ಒಟ್ಟು 87.13 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಪಾಲಿಕೆಯದ್ದು. 2020 ಜನವರಿ ವೇಳೆಗೆ 35.26 ಕೋಟಿ ರೂ. ಸಂಗ್ರಹವಾಗಿದ್ದು, 51.30 ಕೋಟಿ ರೂ. ಬಾಕಿ ಇತ್ತು. ಫೆಬ್ರವರಿ ತಿಂಗಳಲ್ಲಿ 11.67 ಕೋಟಿ ರೂ. ವಸೂಲಾಗಿದ್ದು, ಒಟ್ಟು ಗುರಿಯಲ್ಲಿ 46.93 ಕೋಟಿ ರೂ. ಸಂಗ್ರಹವಾಗಿದೆ. ಮಾರ್ಚ್‌ ತಿಂಗಳ 10 ದಿನ ಕಳೆದಿದ್ದು, ಆರ್ಥಿಕ ವರ್ಷ ಅಂತ್ಯಗೊಳ್ಳಲು 20 ದಿನಗಳಷ್ಟೇ ಇವೆ. ಬಾಕಿ ತೆರಿಗೆ ಇನ್ನಷ್ಟೇ ವಸೂಲಿ ಆಗಬೇಕಿದೆ.

ಆಸ್ತಿ ತೆರಿಗೆ ಕಡಿಮೆ ಏಕೆ?
ಪಾಲಿಕೆ ವ್ಯಾಪ್ತಿಯಲ್ಲಿ 2008-09ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಸರಕಾರಿ ಹಾಗೂ ಖಾಸಗಿ ಮಾಲಕತ್ವಕ್ಕೆ ಒಳಪಟ್ಟ ಎಲ್ಲ ನಿವೇಶನ ಹಾಗೂ ನಿವೇಶನವನ್ನೊಳಗೊಂಡ ಕಟ್ಟಡಗಳು ಈ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಆದರೆ ಹಲವಾರು ಆಸ್ತಿಗಳಿಗೆ ಸಂಬಂಧಿಸಿದಂತೆ ಪಾವತಿಗಳಲ್ಲಿ ಬರುತ್ತಿರುವ ವ್ಯತ್ಯಾಸ, ವಿವರ ಪಟ್ಟಿಗಳಲ್ಲಿ ಅಸಮರ್ಪಕ ವಿವರ, ಅವಧಿ ಮೀರಿದ ಪಾವತಿಗಳಿಗೆ ಹಾಕಿದ ದಂಡನೆ ಪಾವತಿಸದಿರುವುದು ಹಾಗೂ ಕಡಿಮೆ ಪಾವತಿ ಮಾಡಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ.

Advertisement

ಸೇವಾ ಶುಲ್ಕ
ಕಟ್ಟಡ ನಂಬರನ್ನು ತಪ್ಪಾಗಿ ನಮೂದಿಸಿರುವುದು, ಹೊಸ ಕಟ್ಟಡಗಳನ್ನು ನಿರ್ಮಿಸಿದ್ದರೂ ಹಳೆ ಕಟ್ಟಡ ನಂಬರನ್ನು ಮುಂದುವರಿಸಿ ಹಳೆ ವಿಸ್ತೀರ್ಣವನ್ನು ಲೆಕ್ಕಾಚಾರ ಮಾಡಿ ಪಾವತಿಸಿರುವ ಹಲವು ಪ್ರಕರಣಗಳು ತನಿ ಖೆಯ ವೇಳೆ ಬೆಳಕಿಗೆ ಬಂದಿವೆ. ಜತೆಗೆ ವಿನಾಯಿತಿ ವ್ಯಾಪ್ತಿಗೆ ಒಳಪಡದ ವಾಣಿಜ್ಯ/ವಾಸ್ತ ವ್ಯೇತರ ಉದ್ದೇಶದ ಕಟ್ಟಡಗಳಿಗೆ ಸೇವಾ ಶುಲ್ಕವನ್ನು ಪಾವತಿಸಿ ರುವುದೂ ಗಮನಕ್ಕೆ ಬಂದಿದೆ.

ಇದು ಪ್ರಸ್ತುತ ಸಾಲಿನ ತೆರಿಗೆ ಪಾವತಿ ಪ್ರಗತಿಯು ಕುಂಠಿತವಾಗಲು ಕಾರಣ. ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಹಾಗೂ ವಾಣಿಜ್ಯ ಮಳಿಗೆ/ಸಂಕೀರ್ಣಗಳಲ್ಲಿ ಮಾಲಕತ್ವ ಪಡೆದವರು, ಬಿಲ್ಡರ್‌ಗಳು ಹಲವು ವರ್ಷಗಳಿಂದ ಆಸ್ತಿ ತೆರಿಗೆಯನ್ನೇ ಪಾವತಿ ಮಾಡಿಲ್ಲ. ಈ ಎಲ್ಲ ಸವಾಲುಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಿದೆ.

ಆಸ್ತಿ ತೆರಿಗೆ ಹೆಚ್ಚಳದ ಸವಾಲು
ಕರ್ನಾಟಕ ಪೌರ ಕಾಯಿದೆ ಪ್ರಕಾರ ಪ್ರತಿ 3 ವರ್ಷಗಳಿಗೊಮ್ಮೆ ನಗರ ಸ್ಥಳೀಯ ಆಡಳಿತ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಬೇಕು. ನಿಯಮದಂತೆ 2017ರಲ್ಲಿ ಶೇ.15ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿತ್ತು. ಇದಾಗಿ ಮೂರು ವರ್ಷಗಳು ಕಳೆದಿವೆ. 2020ರ ಎ.1ರಿಂದ ಅನ್ವಯವಾಗುವಂತೆ ಮತ್ತೆ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕು. ಆದರೆ ನಾಗರಿಕರಿಗೆ ಹೊರೆಯಾಗದಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಜನರ ವಿಶ್ವಾಸ ಗಳಿಸುವುದೂ ಒಂದು ಸವಾಲೇ ಸರಿ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ಬಂದ ಬಳಿಕ 2008, 2011, 2014 ಹಾಗೂ 2017 ಸೇರಿ ಒಟ್ಟು ನಾಲ್ಕು ಬಾರಿ ಹೆಚ್ಚಳ ಮಾಡಲಾಗಿತ್ತು.

ಬಾಕಿ ಕಂದಾಯ ವಸೂಲಾತಿಗೆ ವಿಶೇಷ
ಅಭಿಯಾನ ಕೈಗೊಂಡು ಫೆಬ್ರವರಿ ತಿಂಗಳಲ್ಲಿ 11.67 ಕೋಟಿ ರೂ. ಆಸ್ತಿ ತೆರಿಗೆ ವಸೂಲು ಮಾಡಲಾಗಿದೆ. ಇದರೊಂದಿಗೆ ಒಟ್ಟು ಆಸ್ತಿ ತೆರಿಗೆ ಸಂಗ್ರಹ 46,93,34,000 ರೂ. ಗೇರಿದ್ದು ಶೇ. 87.13 ಗುರಿ ವಸೂಲಾಗಿದೆ.

“ಹೊಸ ಮೇಯರ್‌-ಹಲವು ಸವಾಲು’
ಜನರ ನಿರೀಕ್ಷೆಗೆ ಸುದಿನ ವೇದಿಕೆ
“ಹೊಸ ಮೇಯರ್‌-ಹಲವು ಸವಾಲು’ ಎನ್ನುವ ಸರಣಿಯಲ್ಲಿ ನೀವೂ ಭಾಗವಹಿಸಿ. ನಗರದ ಅಭಿವೃದ್ಧಿ ಕುರಿತಂತೆ ಸೂಕ್ತವಾದ ಸಲಹೆಗಳನ್ನು ಸಂಕ್ಷಿಪ್ತವಾಗಿ ಬರೆದು ಹೆಸರು, ಫೋಟೋದೊಂದಿಗೆ ವಾಟ್ಸಾಪ್‌ ಮಾಡಬಹುದು.
9900567000

-  ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next