Advertisement

ಕೊನೆಗೂ ತೆಂಗಿನ ಮರದಿಂದ ಇಳಿಯುವಲ್ಲಿ ಯಶಸ್ವಿಯಾದ ಚಿರತೆ!

03:14 PM May 15, 2023 | Team Udayavani |

ಪಣಜಿ: ಕುಯ್ನಾನ್ ಸಾವಯಿ ವೇರೆಮ್‍ನಲ್ಲಿ ಎತ್ತರದ ತೆಂಗಿನ ಮರದಲ್ಲಿ ಸಿಲುಕಿಬಿದ್ದಿದ್ದ ಚಿರತೆಯನ್ನು ದಿನವಿಡೀ ಕಾರ್ಯಾಚರಣೆ ನಡೆಸಿ ಕೊನೆಗೂ ಮರದಿಂದ ಕೆಳಗಿಳಿಸುವಲ್ಲಿ ಅರಣ್ಯ ಇಲಾಖೆ ಸಿಬಂದಿಗಳು ವಿಫಲವಾಗಿದ್ದರು. ಆದರೆ ಮಧ್ಯರಾತ್ರಿಯ ವೇಳೆಗೆ ಚಿರತೆ ತಾನಾಗಿಯೇ ತೆಂಗಿನ ಮರದಿಂದ ಕೆಳಗಿಳಿದು ಅರಣ್ಯಕ್ಕೆ ಸೇರಿಕೊಂಡಿದೆ.

Advertisement

ಭಾನುವಾರ ದಿನವಿಡೀ ಚಿರತೆಯನ್ನು ಕೆಳಗಿಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿಗಳು ಹರಸಾಹಸಪಟ್ಟಿದ್ದರು.  ಆದರೆ, ಚಿರತೆ ಕೆಳಗಿಳಿಯಲಿಲ್ಲ. ಕೊನೆಗೆ ಭಾನುವಾರ ಮಧ್ಯರಾತ್ರಿ ಚಿರತೆ ಮರದಿಂದ ಕೆಳಗಿಳಿದು ಕಾಡಿಗೆ ಸೇರಿದೆ.

ಸಾವಯಿ ವೇರೆಮ್‍ನಲ್ಲಿ ಚಿರತೆ ತಾನಾಗಿಯೇ ಮರದಿಂದ ಕೆಳಕ್ಕಿಳಿದು ಪರಾರಿಯಾಗಿದೆ ಎಂದು ಅರಣ್ಯಾಧಿಕಾರಿ ದೀಪಕ್ ತಾಂಡೇಲ್ ತಿಳಿಸಿದ್ದಾರೆ. ಹೀಗಾಗಿ ನಾಡಿಗೆ ಬಂದು ತೆಂಗಿನ ಮರದ ಮೇಲೆ ಚಿರತೆ ಕುಳಿತಿದ್ದರಿಂದ ಭಯಭೀತರಾಗಿದ್ದ ಗ್ರಾಮಸ್ಥರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next