Advertisement

ಪ್ರಾಂಶುಪಾಲೆಗೆ ಘೇರಾವ್‌ : ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಕೇಸು ದಾಖಲು

12:29 AM Feb 26, 2023 | Team Udayavani |

ಕಾಸರಗೋಡು: ಇಲ್ಲಿನ ಸರಕಾರಿ ಕಾಲೇಜಿನ ಪ್ರಾಂಶುಪಾಲೆ ಎಂ. ರಮಾ ಅವರಿಗೆ ಘೇರಾವ್‌ ಹಾಕಿ, ಹಲ್ಲೆ ನಡೆಸಿದ ಆರೋಪದಲ್ಲಿ ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಿಪಿನ್‌ರಾಜ್‌, ಏರಿಯಾ ಕಾರ್ಯದರ್ಶಿ ಇಮಾನ್ವಲ್‌, ಕಾಸರಗೋಡು ಸರಕಾರಿ ಕಾಲೇಜು ಘಟಕ ಕಾರ್ಯದರ್ಶಿ ವಿಪಿನ್‌ರಾಜ್‌, ಅಧ್ಯಕ್ಷ ಅಕ್ಷಯ್‌, ಪೂಜಾ, ಸ್ನಿಗ್ಧಾ, ಜೋತಿಷ್‌, ಸುಜನ, ಭಗತ್‌, ಭರತ್‌ ಸಹಿತ 60 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾಲೇಜಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗಿಲ್ಲವೆಂದು ಆರೋಪಿಸಿ ಎಸ್‌ಎಫ್‌ಐ ಕಾರ್ಯಕರ್ತರು ಚೇಂಬರ್‌ಗೆ ನುಗ್ಗಿ ತನಗೆ ಘೇರಾವ್‌ ಹಾಕಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದರು. ಮಧ್ಯಾಹ್ನ ಊಟ ಮಾಡಲೆಂದು ಚೇಂಬರ್‌ನಿಂದ ಹೊರ ಬರುತ್ತಿದ್ದಾಗ ಎಸ್‌ಎಫ್‌ಐ ಕಾರ್ಯಕರ್ತರು ತನ್ನನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಪ್ರಾಂಶುಪಾಲೆ ಎಂ. ರಮಾ ಆರೋಪಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next