Advertisement

ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮಾರಾಮಾರಿ: ಹಲವರಿಗೆ ಗಾಯ, ಪುರಸಭೆ ಸದಸ್ಯ ಸೇರಿ 10 ಜನರ ಬಂಧನ

11:13 AM Jan 12, 2021 | keerthan |

ವಿಜಯಪುರ: ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎರಡು ತಂಡಗಳ ಆಟಗಾರರು ಅಂಪೈರ್ ತೀರ್ಮಾನದ ವಿಷಯದಲ್ಲಿ ಹೊಡೆದಾಡಿಕೊಂಡಿದ್ದು, ಹಲವರು ಗಾಯಗೊಂಡು ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಘಟನೆಗೆ‌ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ಪುರಸಭೆ ಉಪಾಧ್ಯಕ್ಷ ಮುಸ್ತಫಾ ಚೌಧರಿ ಸೇರಿದಂದತೆ 10 ಜನರನ್ನು ಬಂಧಿಸಿದ್ದಾರೆ.

ತಾಳಿಕೋಟೆ ಪಟ್ಟಣದ ಅಂಜುಮನ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಸದ್ದಾಂ ಅಲ್ಲಾಭಕ್ಷ ಮನಗೂಳಿ ಹಾಗೂ ಸಿಕಂದರ್ ಮರ್ತೂಜಸಾಬ ಡೋಣಿ ಇವರ ಗುಂಪುಗಳ ಮಧ್ಯೆ ಜಗಳ ಆರಂಭಗೊಂಡಿದ್ದು, ಜಗಳ ತಾರಕಕ್ಕೆ ಏರಿದಾಗ ಕ್ರಿಕೆಟ್ ಬ್ಯಾಟ್, ಸ್ಟಿಕ್ ಗಳಿಂದ ಹೊಡೆದಾಡಿದ್ದಾರೆ.

ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರೆ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

Advertisement

ಇದನ್ನೂ ಓದಿ:ಕೆರೆಯಲ್ಲಿ ಜಾರಿ ಬಿದ್ದ ಉರಗ ತಜ್ಞ: ಕಾಳಿಂಗ ಸರ್ಪದ ಕಡಿತದಿಂದ ಕೂದಲೆಳೆಯಲ್ಲಿ ಪಾರು

ಘಟನೆಯಲ್ಲಿ ಎರಡೂ ಕಡೆಯ 51 ಜನರ ವಿರುದ್ಧ ದೂರು-ಪ್ರತಿ ದೂರು ತಾಳಿಕೋಟೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next