Advertisement

ಕನ್ನಡ ಉಳಿಸಲು ಹೋರಾಡಿ

06:29 AM Mar 11, 2019 | Team Udayavani |

ಕೆ.ಆರ್‌.ಪುರ: ಕನ್ನಡ ಭಾಷೆ, ನೆಲ, ಜಲ, ಗಡಿಯ ವಿಚಾರ ಬಂದಾಗ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಹೋರಾಡಿ ಕನ್ನಡತನ ಉಳಿಸಬೇಕೆಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್‌ಕುಮಾರ್‌ ತಿಳಿಸಿದರು. ಇಲ್ಲಿನ ಕೃಷ್ಣ ಚಿತ್ರಮಂದಿರದ ಮುಖ್ಯ ರಸ್ತೆ ಡಾ.ವಿಷ್ಣುಸೇನಾ ಸೇವೆಯ ಸೇನಾ ಕಚೇರಿಯಲ್ಲಿ ನೂತನ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗೆ ಚಾಲನೆ ನೀಡಿ ಮಾತನಾಡಿದರು.

Advertisement

ಸಮಾಜಮುಖೀ ಕಾರ್ಯ: ನೂತನ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು  ನಾಡಿನ ಏಳಿಗೆಗಾಗಿ  ರಾಜ್ಯಾದ್ಯಂತ ವಿವಿಧ ಹೋರಾಟ-ಸಮಾಜಮುಖೀ ಕಾರ್ಯಗಳಲ್ಲಿ ಸಕ್ರಿಯವಾಗಿ ಶ್ರಮಿಸುತ್ತೇವೆ.  

ಕಾರ್ಯಕರ್ತರು ಸಂಘಟನೆ ಹೆಸರನ್ನು ದುರ್ಬಳಕೆ ಮಾಡದೆ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕೆಂದರು. ಈ ವೇಳೆ ಕೆ.ಆರ್‌.ಪುರದ ವಿವಿಧಡೆ ಬೈಕ್‌ ರ್ಯಾಲಿ ನಡೆಯಿತು. ದೇವಸಂದ್ರದ ವಿದ್ಯಾರಣ್ಯ ಅನಾಥಾಶ್ರಮದ ಮಕ್ಕಳಿಂದ ನೂತನ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಉದ್ಘಾಟಿಸಲಾಯಿತು.

ಕೆ.ಆರ್‌.ಪುರ ಘಟಕದ ಡಾ.ವಿಷ್ಣುಸೇನಾ ಸೇವೆಯ ಅಧ್ಯಕ್ಷ ಎಂ.ಬಾಬು, ವಿಜಯಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ರಾಜ್ಯ ಉಪಾಧ್ಯಕ್ಷ ಪ್ರವೀಣ್‌ಗೌಡ, ಕಾರ್ಯದರ್ಶಿ ಉಮೇಶ್‌, ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಸುಬ್ರಮಣ್ಯ, ಮನು, ಪುರುಷೋತ್ತಮ, ಸಂತೋಷಕುಮಾರ್‌, ನಾಯಕ್‌, ಫ‌ಣೀಂದ್ರ, ರಮೇಶ್‌, ನಿಖೀಲ್‌ಗೌಡ  ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next