Advertisement

ಕಾಲೇಜಿನಲ್ಲಿ ನೃತ್ಯ ಮಾಡುವ ವಿಷಯಕ್ಕೆ ಜಗಳ : ಚಾಕು ಇರಿದು ವಿದ್ಯಾರ್ಥಿ ಕೊಲೆ

12:42 PM Aug 13, 2022 | Team Udayavani |

ಬೆಂಗಳೂರು: ವಿದ್ಯಾರ್ಥಿಗಳ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಶಾಂಪುರ ಮುಖ್ಯರಸ್ತೆಯಲ್ಲಿ ಶುಕ್ರವಾರ ನಡೆದಿದೆ.

Advertisement

ಎಚ್‌ಬಿಆರ್‌ ಲೇಔಟ್‌ ಸಮೀಪ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೊಹಮ್ಮದ್‌ ಅರ್ಬಾಜ್‌ (18) ಕೊಲೆಯಾದ ವಿದ್ಯಾರ್ಥಿ.  ಈ ಘಟನೆಯಲ್ಲಿ ಮತ್ತೂಬ್ಬ ಪಿಯುಸಿ ವಿದ್ಯಾರ್ಥಿ ಫ‌ರಾಜ್‌ ಸಹ ಗಾಯಗೊಂಡಿದ್ದಾನೆ.

ಕೃತ್ಯ ಎಸಗಿ ಪರಾರಿಯಾಗಿರುವ ಬಿ.ಕಾಂ ವಿದ್ಯಾರ್ಥಿ ಮೊಹಮ್ಮದ್‌ ಸಾದ್‌ ಹಾಗೂ ಆತನ ಸ್ನೇಹಿತರ ಪತ್ತೆಗಾಗಿ ಶೋಧ ನಡೆಸಲಾಗಿದೆ.

ಕಾಲೇಜಿನಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ವಿಚಾರಕ್ಕೆ ಅರ್ಬಾಜ್‌ ಹಾಗೂ ಸಾದ್‌ ಮಧ್ಯೆ ಜಗಳವಾಗಿದೆ. ಈ ವೇಳೆ ಕೆರಳಿದ ಆರೋಪಿ, ಶುಕ್ರವಾರ ಹೊರಗಿನ ಏಳೆಂಟು ಮಂದಿ ಹುಡುಗರನ್ನು ಕರೆತಂದು ಕಾಲೇಜು ಮುಗಿಸಿ ಹೊರಟಿದ್ದ ಅರ್ಬಾಜ್‌ ಮೇಲೆ ಗಲಾಟೆ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಅರ್ಬಾಜ್‌ಗೆ ಚಾಕು ಇರಿದು ಸಾದ್‌ ಹಾಗೂ ಆತನ ಗೆಳೆಯರು ಓಡಿ ಹೋಗಿದ್ದಾರೆ. ಕೂಡಲೇ ಗಾಯಾಳುವನ್ನು ಸಮೀಪ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫ‌ಲಿಸದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next