Advertisement

ನ್ಯಾಯಾಂಗ ಇಲಾಖೆ ಮಹಿಳಾ ಉದ್ಯೋಗಿ ಶವ ನಾಲೆಯಲ್ಲಿ ಪತ್ತೆ

09:16 PM Sep 26, 2022 | Team Udayavani |

ಹುಣಸೂರು:ನ್ಯಾಯಾಲಯದ ಮಹಿಳಾ ಉದ್ಯೋಗಿಯೊಬ್ಬರ ಶವ ನಾಲೆಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

Advertisement

ಮೂಲತಃ ಪಿರಿಯಾಪಟ್ಟಣ ತಾಲೂಕಿನ ಕುಡುಕೂರಿನ ಕೆ.ಕೆ.ರಾಮರಾಜೇ ಅರಸ್‌ ಅವರ ಪತ್ನಿ, ಹುಣಸೂರು ನ್ಯಾಯಾಲಯದ ದ್ವಿತೀಯ ದರ್ಜೆ ಸಹಾಯಕಿ ಭಾಗ್ಯಮಣ್ಣಿ(40) ಮೃತರು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಭಾಗ್ಯಮಣ್ಣಿಯವರು ಎಂದಿನಂತೆ ಪತಿಯೊಂದಿಗೆ ಪಿರಿಯಾಪಟ್ಟಣಕ್ಕೆ ಬಂದು ಹುಣಸೂರು ಬಸ್ ಹತ್ತಿದ್ದರೆನ್ನಲಾಗಿದ್ದು, ಆದರೆ ಇಂದು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಮಧ್ಯಾಹ್ನದ ವೇಳೆಗೆ ತಾಲೂಕಿನ ಹನಗೋಡು ಹೋಬಳಿಯ ಆಡಿಗನಹಳ್ಳಿಯಿಂದ ತಟ್ಟೆಕೆರೆಗೆ ತೆರಳುವ ಮಾರ್ಗದ ಹಾರಂಗಿ ನಾಲೆಯಲ್ಲಿ ಶವ ಪತ್ತೆಯಾಗಿದ್ದು, ಅಕ್ಕಪಕ್ಕದ ಜಮೀನಿನವರು ಮಾಹಿತಿ ನೀಡಿದ ಮೇರೆಗೆ ಇನ್ಸ್ಪೆಕ್ಟರ್ ಸಿ.ವಿ.ರವಿ ಸ್ಥಳಪರಿಶೀಲನೆ ನಡೆಸಿದರು.

ಪೊಲೀಸರು ಶವವನ್ನು ಮೇಲೆತ್ತಿಸಿ ಶವಾಗಾರಕ್ಕೆ ಸಾಗಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next