Advertisement

ಭೀಮಕ್ಕಗೆ ಆತ್ಮೀಯ ಸನ್ಮಾನ

11:53 AM Nov 06, 2019 | Suhan S |

ಧಾರವಾಡ: ಭಾರತೀಯ ಸೇನೆಗೆ ಆಯ್ಕೆಯಾದ ತಾಲೂಕಿನ ಮದಿಕೊಪ್ಪ ಗ್ರಾಮದ ಯುವತಿ ಭೀಮಕ್ಕ ಚವ್ಹಾಣ ಅವರಿಗೆ ಮಂಗಳವಾರ ಸ್ವಗ್ರಾಮದಲ್ಲಿ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಗ್ರಾಮದ ಗುರು-ಹಿರಿಯರಿಂದ ಸನ್ಮಾನಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಶಾಸಕ ದೇಸಾಯಿ, ಕಡು ಬಡತನದಲ್ಲಿಯೂ ಸೇನೆ ಸೇರುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ. ದೇಶ ರಕ್ಷಣೆಗಾಗಿ ಗಡಿಯಲ್ಲಿ ಯುದ್ದಕ್ಕಾಗಿ ಹೋಗುತ್ತಿದ್ದಾಳೆ. ಅವಳಿಗೆ ಒಳ್ಳೆಯದಾಗಲಿ. ಉನ್ನತ ಹುದ್ದೆ ಏರಲಿ ಎಂದು ಶುಭ ಹಾರೈಸಿದರು. ಭೀಮಕ್ಕಳ ಮನೆಗೆ ಭೇಟಿ ಕೊಟ್ಟು ಬಂದಿದ್ದು, ಅವರ ಮನೆ ನೋಡಿ ಕೆಟ್ಟ ಅನುಭವವಾಗಿದೆ. ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಪಿಡಿಒ ಸೇರಿ ಅವರಿಗೆ ಮೊದಲ ಪಟ್ಟಿಯಲ್ಲಿಯೇ ಮನೆ ಹಾಕಿಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಪ್ರೇಮಾ ಕೊಮಾರದೇಸಾಯಿ, ನಾಗಪ್ಪ ಗಾಣಿಗೇರ, ಫಕ್ಕೀರಪ್ಪ ಜಾಧವ್‌, ಶಿವಾಜಿ ಜಾಧವ, ನಾಗಪ್ಪ ಜಾಧವ್‌, ಯಲ್ಲಪ್ಪ ಬಾಗೋಡಿ, ಮಹೇಶ ಯಲಿಗಾರ, ಮಾಮತಾಜ ಅಂಕಲಗಿ, ನಾರಾಯಣ ಹುಡೇದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next