Advertisement

ತೆಂಗಿನಮರಕ್ಕೆ  ಹುಳ ಬಾಧೆ: ಪ್ರಾತ್ಯಕ್ಷಿಕೆ

02:14 PM Feb 25, 2017 | Team Udayavani |

ಉಡುಪಿ: ಉಡುಪಿಯ ಗುಂಡಿಬೈಲು, ಕಲ್ಸಂಕ, ನಿಟ್ಟೂರು ಪರಿಸರದಲ್ಲಿ ತೆಂಗಿನ ಮರಗಳಿಗೆ ಬಹಳಷ್ಟು ಬಾಧಿಸಿರುವ ಕಪ್ಪು ತಲೆ ಹುಳದ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಪ್ರಾತ್ಯಕ್ಷಿಕೆಗೆ ಕಾಸರಗೋಡಿನ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ಮತ್ತು ಉಡುಪಿಯ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ ಇತ್ತು ಮಾಹಿತಿ ಒದಗಿಸಿದರು. 

Advertisement

ತೆಂಗಿನ ಮರಗಳಿಗೆ ಬಾಧಿಸಿದ ರೋಗ ಹತೋಟಿಗಾಗಿ ಪರೋಪಕಾರಿ ಜೀವಿಗಳನ್ನು ಮರಗಳಿಗೆ ಬಿಡುವ ಮೂಲಕ ಪ್ರಾತ್ಯಕ್ಷಿಕೆ ಸಹಿತ ಮಾಹಿತಿಯನ್ನು ನೀಡಿದರು. ಸಿ.ಪಿ.ಸಿ.ಆರ್‌.ಐ. ಕೀ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ವಿನಾಯಕ್‌ ಹೆಗ್ಡೆ, ವಿಜ್ಞಾನಿಗಳಾದ ಡಾ| ಪ್ರತಿಭಾ ಪಿ.ಎಸ್‌. ಹಾಗೂ ಉಡುಪಿ ಜಿÇÉೆಯ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಎಚ್‌.ಎಸ್‌. ಚೈತನ್ಯಾ ಹಾಗೂ ಶಿವಕುಮಾರ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ , ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಜೀವ ನಾಯ್ಕ ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next