Advertisement

ಉಕ್ಕು ಕಂಪನಿಗಳಿಗೆ ಮುಚ್ಚುವ ಭೀತಿ

12:53 AM Aug 04, 2019 | mahesh |

ನವದೆಹಲಿ: ದೇಶದ ಉಕ್ಕು ಉದ್ಯಮದ ಪ್ರಧಾನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೆಮ್ಶೆಡ್ಪುರದಲ್ಲಿ 30 ಕಂಪನಿಗಳು ಮುಚ್ಚುವ ಸ್ಥಿತಿಯಲ್ಲಿವೆ. ಅವುಗಳಲ್ಲಿ ಟಾಟಾ ಮೋಟರ್ಸ್‌ ಕೂಡ ಸೇರಿದೆ. ಕಳೆದ ತಿಂಗಳಿಂದ ಈಚೆಗೆ ನಾಲ್ಕನೇ ಬಾರಿಗೆ ಗುರುವಾರದಿಂದ ಶನಿವಾರದ ವರೆಗೆ (ಆ.3) ಸಂಸ್ಥೆಗೆ ರಜೆ ಘೋಷಿಸಲಾಗಿತ್ತು

Advertisement

ಜೆಮ್ಶೆಡ್ಪುರದ ಆದಿತ್ಯಪುರ ಕೈಗಾರಿಕಾ ಪ್ರದೇಶದಲ್ಲಿ ಇರುವ ವಾಹನಗಳ ಬಿಡಿಭಾಗ ತಯಾರಿಸುವ ಕಾರ್ಖಾನೆಗಳು ಸಂಕಷ್ಟದ ಸ್ಥಿತಿ ಎದುರಿಸುತ್ತಿವೆ. ಟಾಟಾ ಮೋಟರ್ಸ್‌ ತನ್ನ 1 ಸಾವಿರ ತಾತ್ಕಾಲಿಕ ನೌಕರರನ್ನು ಸದ್ಯಕ್ಕೆ ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿದೆ. 2 ತಿಂಗಳಲ್ಲಿ 15 ದಿನ ಮಾತ್ರ ಉತ್ಪಾದನಾ ಪ್ರಕ್ರಿಯೆ ನಡೆದಿದೆ. ಪೂರ್ಣಕಾಲಿಕ ಉದ್ಯೋಗಿಗಳು ಆ.5ರ ನಂತರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ವಿದ್ಯುತ್‌ ಶುಲ್ಕದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದರಿಂದ ಕೂಡ 30 ಕಂಪನಿಗಳಿಗೆ ಕಷ್ಟ ಉಂಟಾಗಿದೆ. ವಾಹನೋದ್ಯಮ ಕ್ಷೇತ್ರದಲ್ಲಿ ಉಂಟಾಗಿರುವ ಹಿಂಜರಿತ ಕೂಡ ಈ ಬೆಳವಣಿಗೆಗೆ ಕಾರಣ. ಇಂಥ ಬೆಳವಣಿಗೆ ಕ್ಷೇತ್ರಕ್ಕೆ ಹೊಸತೇನೂ ಅಲ್ಲ. ಪ್ರತಿ 2-3 ವರ್ಷಗಳಿಗೆ ಇಂಥ ಪರಿಸ್ಥಿತಿ ಬರುತ್ತದೆ ಎಂದು ಆದಿತ್ಯಪುರ ಸಣ್ಣ ಕೈಗಾರಿಕಾ ಸಂಘಗಳ ಅಧ್ಯಕ್ಷ ಇಂದ್ರ ಅಗರ್ವಾಲ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next