Advertisement

Fear..!; ಲಕ್ಷ ಸಿದ್ದು ಬಂದರೂ ಹೆದರೆನು: ಕುಮಾರಸ್ವಾಮಿ ತಿರುಗೇಟು

11:49 PM Oct 05, 2024 | Team Udayavani |

ಬೆಂಗಳೂರು: ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ನನ್ನನ್ನು ಹೆದರಿ ಸಲು ಯಾರಿಂದಲೂ ಆಗದು. ನಾನು ಹೆದರುವುದು ದೇವರಿಗೆ ಮತ್ತು ನಾಡಿನ ಜನರಿಗಷ್ಟೇ. ಸಿದ್ದ ರಾಮಯ್ಯನಂಥವರು ಲಕ್ಷ ಜನ ಬಂದರೂ ಹೆದರಲಾರೆ ಎಂದು ಗುಡುಗಿದರು.

Advertisement

ನಿಮ್ಮ ಮೇಲೆ ಎಫ್ಐಆರ್‌ ಹಾಕಿ ಬೆದರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಅದ್ಯಾವುದೋ ಪ್ರಕರಣ ದಾಖಲಿಸಿಕೊಂಡು ನನ್ನನ್ನು ಹೆದರಿಸಲು ಸಾಧ್ಯವೇ? ಕುಮಾರಸ್ವಾಮಿಗೆ ಬಂಧನದ ಭೀತಿ ಎನ್ನುತ್ತಿದ್ದಾರೆ; ನನಗೆ ಅಂತಹ ಯಾವುದೇ ಭೀತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಫ್ಐಆರ್‌ ದಾಖಲಿಸಿರುವುದು ಬೆದರಿಕೆ ಅಲ್ಲದೆ ಇನ್ನೇನು? ಈಗ ಸರಕಾರ ಮುಡಾ ವಿಷಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಇದು ಎಲ್ಲವನ್ನೂ ಬಿಟ್ಟಿರುವ ಭಂಡ ಸರಕಾರ. ಅದರ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.

ಮುಖ್ಯಮಂತ್ರಿ ದೆವ್ವವಾ?
ನಾನು ಭಯ ಪಡಲು ಮುಖ್ಯಮಂತ್ರಿ ಏನಾದರೂ ದೆವ್ವವೇ? ನಾನು ದೆವ್ವಕ್ಕೂ ಹೆದರುವವನಲ್ಲ. ಇದು ಸಿದ್ದರಾಮಯ್ಯಗೆ ಗೊತ್ತಿರಲಿ ಎಂದು ಕುಮಾರಸ್ವಾಮಿ ಕುಟುಕಿದರು. ನಾನು ಸ್ವತಃ ದುಡಿಮೆಯಿಂದ ರಾಜಕೀಯದಲ್ಲಿ ಮೇಲೆ ಬಂದಿದ್ದೇನೆ; ಸಿದ್ದರಾಮಯ್ಯ ನೆರಳಲ್ಲಿ ಅಲ್ಲ. ಹಾಗೆ ನೋಡಿದರೆ ಸಿದ್ದರಾಮಯ್ಯನವರು ನನ್ನ ಪಕ್ಷದ ಕಾರ್ಯಕರ್ತರು ಮತ್ತು ದೇವೇಗೌಡರ ನೆರಳಿನಲ್ಲಿ ಬಂದವರು ಎಂದು ಹೇಳಿದರು.

ಕುಮಾರಸ್ವಾಮಿ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ದೆವ್ವನಾ, ನಾನೇಕೆ ಹೆದರಲಿ?
ನನಗೆ ಯಾವುದೇ ಬಂಧನ ಭೀತಿಯೂ ಇಲ್ಲ
ಸರಕಾರದಿಂದ ಮುಡಾ ಕೇಸ್‌ ಮರೆಮಾಚುವ ಯತ್ನ
ಇದು ಭಂಡ ಸರಕಾರ, ಚರ್ಚೆ ಅನಗತ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next