Advertisement

Crime: ಪತ್ನಿಯ ಶೀಲ ಶಂಕಿಸಿ 5 ವರ್ಷದ ಪುತ್ರಿಯ ಕೊಂದ ತಂದೆ ಬಂಧನ

11:51 AM Sep 25, 2024 | Team Udayavani |

ಅಜ್ಜಂಪುರ: ಪತ್ನಿಯ ಶೀಲ ಶಂಕಿಸಿ 5 ವರ್ಷದ ಬಾಲಕಿ ಯನ್ನು ತಂದೆಯೇ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಆರ್‌.ಎಸ್‌.ನಲ್ಲಿ ನಡೆದಿದೆ.

Advertisement

ಮಂಜುನಾಥ್‌ ಬೆಂಗಳೂರು ಮೂಲದ ಮಂಗಳ ಎಂಬು ವರನ್ನು 2018ರಲ್ಲಿ ಪ್ರೀತಿಸಿ ಮದುವೆಯಾಗಿದ್ದ. ಪತ್ನಿ ಶೀಲದ ಮೇಲೆ ಸಂಶಯ ಪಟ್ಟಿದ್ದಲ್ಲದೇ ಮಗಳು ವೇದಾ ನನಗೆ ಹುಟ್ಟಿಲ್ಲ ಎಂದು ಅನುಮಾನ ಪಡುತ್ತಿದ್ದ. ಇದೇ ವಿಷಯದಲ್ಲಿ ಪ್ರತಿದಿನ ಜಗಳ ನಡೆಯುತ್ತಿತ್ತು. ಸೆ.19ರಂದು ಮನೆಗೆ ಬಂದಾಗ ಮಗಳು ವೇದಾ ಉಡಾಫೆಯಾಗಿ ಮಾತನಾಡಿದ್ದಕ್ಕೆ ಕಬ್ಬಿಣದ ಕೊಳವೆ ಯಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದೇನೆ ಎಂದು ಮಂಜುನಾಥ್‌ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿ ದ್ದಾನೆ. ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next