Advertisement

ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ರೈತರ ಪ್ರತಿಭಟನೆ

09:37 AM Jun 25, 2019 | Team Udayavani |

ವಡಗೇರಾ: ಸಮೀಪದ ತುಮಕೂರು ಕೋರ್‌ ಗ್ರೀನ್‌ ಸುಗರ್ ಕಂಪನಿ ರೈತರಿಂದ ಕಬ್ಬ ಕಟಾವು ಮಾಡಿಸಿಕೊಂಡು ಹಣ ಪಾವತಿಸಲು ವಿಳಂಬ ಮಾಡುತ್ತಿರುವುದಕ್ಕೆ ಆಕ್ರೋಶಗೊಂಡ ರೈತರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

Advertisement

ಕಾರ್ಖಾನೆಗೆ ಕಬ್ಬು ನೀಡಿ ಸುಮಾರು 6-7 ತಿಂಗಳು ಕಳೆದರೂ ಇನ್ನೂ ಹಣ ನೀಡುತ್ತಿಲ್ಲ ಎಂದು ಕಲಬುರಗಿ, ಬೀದರ ಹಾಗೂ ವಿಜಯಪುರ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ರೈತರು ಕಂಪನಿ ಆಡಳಿತ ಮಂಡಳಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಅಲ್ಲದೇ ಬಾಕಿ ಹಣವನ್ನು ಕೇಳಲು ರೈತರು ಕಾರ್ಖಾನೆಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ರೈತರು ಪದೇ ಪದೇ ಹಣವನ್ನು ಕೇಳಲು ಬಂದರೆ ಕಂಪನಿ ಮುಚ್ಚುತ್ತೇವೆ ಎಂದು ಸಿಬ್ಬಂದಿಗಳು ರೈತರಿಗೆ ಬೆದರಿಸುತ್ತಿದ್ದಾರೆ. ಏಕಾಏಕಿ 3 ದಿನಗಳಿಂದ ಸಕ್ಕರೆ ಕಾರ್ಖಾನೆಗೆ ಬೀಗ ಹಾಕಲಾಗಿದ್ದು, ತಮ್ಮ ಬಾಕಿ ಹಣವನ್ನು ಯಾರಿಗೆ ಕೇಳಬೇಕು ಎಂದು ರೈತರು ಕಂಗಾಲಾಗಿದ್ದಾರೆ.

ಸರ್ಕಾರದ ನಿಯಮದಂತೆ ಕಬ್ಬು ಬೆಳೆಗಾರರಿಗೆ 15 ದಿನದಲ್ಲಿ ರೈತರ ಖಾತೆಗೆ ಹಣ ಸಂದಾಯಮಾಡಬೇಕು ಎನ್ನುವ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಹಲವು ತಿಂಗಳಿಂದ ನೋವು ಅನುಭವಿಸುತ್ತಿರುವ ರೈತರು ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next