Advertisement
ಪಟ್ಟಣದ ಹ್ಯಾಂಡ್ಪೋಸ್ಟ್ನಲ್ಲಿ ರೈತರ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರ ರೈತರನ್ನು ದೇಶದ ಬೆನ್ನೆಲುಬೆಂದು ಬಿಂಬಿಸುತ್ತದೆ, ಶ್ರಮವಹಿಸಿ ದುಡಿಯುವ ಅನ್ನದಾತರ ಕೃಷಿಗೆ ಅಗತ್ಯ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಅಸಮರ್ಪಕ ವಿದ್ಯುತ್ ಸಮಸ್ಯೆ ಸರಿದೂಗಿಸಿಕೊಳ್ಳಲು ಅನ್ನದಾತರು ಅಹೋರಾತ್ರಿ ಅನ್ನುವುದನ್ನೂ ಮರೆತು ವಿದ್ಯುತ್ಗಾಗಿ ಹಾತೊರೆದು ರಾತ್ರಿ ವೇಳೆಯೂ ಜಮೀನುಗಳ ಪಂಪ್ಸೆಟ್ಗಳ ಮೂಲಕ ಬೆಳೆಗಳಿಗೆ ನೀರುಣಿಸಬೇಕಾದ ಸ್ಥಿತಿ ಇದೆ. ತಾಲೂಕು ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ಅರಣ್ಯ ಪ್ರದೇಶವನ್ನು ಸುತ್ತುವರಿದಿದೆ. ಇಲ್ಲಿ ವನ್ಯಜೀವಿಗಳು ಮಾನವ ಸಂಘರ್ಷ ಸಾಮಾನ್ಯವಾಗಿದ್ದು, ಹುಲಿಗಳು ತಾಲೂಕು ಕೇಂದ್ರಕ್ಕೆ ಹಗಲಿನಲ್ಲೂ ಆಶ್ರಯ ಪಡೆದಿರುವ ನಿದರ್ಶನಗಳು ಸಾಕಷ್ಟಿವೆ. ಕಳೆದ 3 ದಿನಗಳ ಹಿಂದಿನಿಂದ ಎಚ್.ಡಿ.ಕೋಟೆ ಪಟ್ಟಣ ಸೇರಿದಂತೆ ತಾಲೂಕಿನ ಕೆ.ಎಡತೊರೆ ಗ್ರಾಮದಲ್ಲಿ ಹಾಡಹಗಲಿನಲ್ಲೇ ಪ್ರತ್ಯಕ್ಷಗೊಂಡಿರುವ ರೈತರು ನಾಗರಿಕರಲ್ಲಿ ತಲ್ಲಣವನ್ನುಂಟು ಮಾಡಿದೆ.
Advertisement
ಅಸಮರ್ಪಕ ವಿದ್ಯುತ್, ಕಾಡುಪ್ರಾಣಿ ಹಾವಳಿ ತಡೆಯಿರಿ
10:25 AM Jan 21, 2023 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.