Advertisement

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌

10:43 PM May 22, 2022 | Team Udayavani |

ಚಂಡೀಗಢ: ದೇಶದ ರೈತರಿಗೆ ಸರ್ಕಾರವನ್ನು ಬದಲಿಸುವ ತಾಕತ್ತಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ.

Advertisement

ಪಂಜಾಬ್‌ನಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿದ ಹೋರಾಟದಲ್ಲಿ ಮೃತರಾದ ರೈತರ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ ವಿತರಿಸುವ ಪಂಜಾಬ್‌ ಸರ್ಕಾರದ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ.

“ರೈತರು ಬಯಸಿದರೆ ಸರ್ಕಾರವನ್ನೇ ಬದಲಿಸಬಹುದು. ಅದೇನೂ ದೊಡ್ಡ ವಿಚಾರವಲ್ಲ. ರೈತರ ಬೆಳೆಗೆ ಸೂಕ್ತ ಲಾಭದಾಯಕ ಬೆಲೆ ಕೊಡುವುದಾಗಿ ಸರ್ಕಾರದಿಂದ ಸಾಂವಿಧಾನಿಕ ಖಾತರಿ ಬರುವವರೆಗೂ ರೈತರು ಹೋರಾಟ ಮುಂದುವರಿಸಬೇಕು’ ಎಂದು ಅವರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next