Advertisement

ನೂತನ ಕೃಷಿ ಕಾಯ್ದೆ: ಜನವರಿ 4ರ ಮಾತುಕತೆ ವಿಫಲಗೊಂಡರೆ ಟ್ರ್ಯಾಕ್ಟರ್ ರಾಲಿ: ರೈತ ಸಂಘಟನೆ

11:40 AM Jan 02, 2021 | Team Udayavani |

ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಬೇಡಿಕೆ ಈಡೇರಿಕೆ ಕುರಿತು ಕೇಂದ್ರ ಸರ್ಕಾರ ಜತೆಗೆ ಜನವರಿ 4ರಂದು ನಡೆಯಲಿರುವ ಮಾತುಕತೆ ವಿಫಲಗೊಂಡರೆ ಮುಂದಿನ ಹಂತದಲ್ಲಿ ಟ್ರ್ಯಾಕ್ಟರ್ ರಾಲಿ ನಡೆಸಲು ನಿರ್ಧರಿಸಿರುವುದಾಗಿ ರೈತ ಸಂಘಟನೆಗಳು ಶನಿವಾರ(ಜನವರಿ 2) ತಿಳಿಸಿದೆ.

Advertisement

ಒಂದು ವೇಳೆ ಜನವರಿ 4ರ ಮಾತುಕತೆ ವಿಫಲಗೊಂಡರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಹೇಳಿವೆ. ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಂ) ರೈತ ಸಂಘಟನೆ ಶುಕ್ರವಾರ(ಜ.1) ಸಿಂಘು ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರನ್ನು ಭೇಟಿಯಾಗಿ ಒಂದು ವೇಳೆ ಕೇಂದ್ರ ಸರ್ಕಾರದ ಜತೆಗಿನ ಮಾತುಕತೆ ವಿಫಲಗೊಂಡರೆ ಜನವರಿ 6ರಂದು ಕುಂಡ್ಲಿ ಮನೇಸರ್ ಪಾಲ್ವಾಲ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ರಾಲಿ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದೆ.

ಮಾತುಕತೆ ನಂತರ ಪ್ರಕಟಣೆ ನೀಡಿರುವ ಸಂಘಟನೆ, 6ನೇ ಸುತ್ತಿನ ಮಾತುಕತೆಯಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ದೆಹಲಿಗೆ ತೆರಳುವ ಶಹಜಹಾನ್ ಪುರ್ ಗಡಿಯನ್ನು ಬಂದ್ ಮಾಡಿ, ಜನವರಿ 6ರಿಂದ 20ರವರೆಗೆ ದೇಶ್ ಜಾಗೃತಿ ಅಭಿಯಾನ ನಡೆಸುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next