Advertisement

ಎಪಿಎಂಸಿಯಲ್ಲಿ ವಿಷ ಸೇವಿಸಿ ರೈತ ಸಾವು

11:47 AM Jul 30, 2022 | Team Udayavani |

ಕೊಪ್ಪಳ: ತಾಲೂಕಿನ ಹನಕುಂಟಿ ಗ್ರಾಮದ ರೈತ ರವಿಕುಮಾರ ಲಕ್ಕುಂಡಿ ಎನ್ನುವಾತ ಕೊಪ್ಪಳದ ಎಪಿಎಂಸಿಯ ಪಾರಸ್ ಟ್ರೇಡಿಂಗ್ ಕಂಪನಿ ಅಂಗಡಿಯಲ್ಲಿ ಬೆಳೆ ವಹಿವಾಟು ವಿಚಾರದಲ್ಲಿ ಮನನೊಂದು ವಿಷ ಸೇವಿಸಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Advertisement

ಪಾರಸ್ ಟ್ರೇಡಿಂಗ್ ಅಂಗಡಿಗೆ ರೈತ ರವಿ ಕುಮಾರ್ ಒಂದು ಲಕ್ಷ ರೂ.ನಷ್ಟು ಫಸಲನ್ನು ಮಾರಾಟ ಮಾಡಿದ್ದನು. ಅಂಗಡಿ ಮಾಲಿಕರು ನಿನ್ನ ಬೆಳೆ ಹಣಕ್ಕೂ ಸಾಲಕ್ಕೂ ಚುಕ್ತಾ ಆಗಿದೆ ಎಂದಿದ್ದ. ಇದರಿಂದ ವಾದ ನಡೆದಿದೆ. ರೈತ ಗುರುವಾರ ವಿಷ ಸೇವಿಸಿದ್ದಾನೆ. ಅಸ್ವಸ್ಥಗೊಂಡ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾದರೂ ಫಲಿಸದೆ ಮೃತಪಟ್ಡಿದ್ದಾನೆ.

ಅಂಗಡಿ ಮಾಲಿಕರೆ ರವಿ ಕುಮಾರ್ ಸಾವಿಗೆ ಕಾರಣ. ಹೆಚ್ಚುವರಿ ಹಣ ಕೊಡದೇ ಇರುವುದಕ್ಕೆ ಮನನೊಂದು ನಮ್ಮ ಅಳಿಯ ವಿಷ ಸೇವಿಸಿದ್ದಾನೆ. ಕೂಡಲೇ ಅಂಗಡಿ ಮಾಲಿಕರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಮೃತ ರೈತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next