Advertisement
ಚಿತ್ತಾಪುರ ವ್ಯಾಪ್ತಿಯಲ್ಲಿರುವ ನಾಲವಾರ ರೈತ ಸಂಪರ್ಕ ಕೇಂದ್ರ ಬೇಡಿಕೆಗೆ ತಕ್ಕಷ್ಟು ಬೀಜ ಮತ್ತು ಗೊಬ್ಬರ ಶೇಖರಿಸಿಟ್ಟುಕೊಂಡಿದ್ದು, ಮುಂಗಾರು ಮುನಿಸಿಕೊಂಡ ಪರಿಣಾಮ ನಿರೀಕ್ಷೆಯಂತೆ ಪೈಪೋಟಿ ಉಂಟಾಗಿಲ್ಲ. ಮಂಜುಗಟ್ಟಿದ ಮೋಡಗಳು ಕರಗಿ ಮುಂಗಾರು ಮಳೆಯಾಗಿ ಮಣ್ಣಿಗೆ ಸೇರುವಂತಾದರೆ ಕೃಷಿ ಚಟುವಟಿಕೆ ಗರಿಗೆದರಲು ಸಾಧ್ಯವಾಗುತ್ತದೆ. ಆದರೆ ಸಕಾಲದಲ್ಲಿ ಮುಂಗಾರು ಸುರಿಯದ ಕಾರಣ ಬೀಜ ಹೊತ್ತು ನಿಂತ ನಾಲವಾರ, ವಾಡಿ, ಸನ್ನತಿ, ಕೊಲ್ಲೂರ, ಕಮರವಾಡಿ, ಹಳಕರ್ಟಿ, ಲಾಡ್ಲಾಪುರ, ಮಳಗ, ಮಾರಡಗಿ, ರಾವೂರ, ಇಂಗಳಗಿ ಭಾಗದ ರೈತರು ತೀವ್ರ ನಿರಾಸೆಗೊಳ್ಳುವಂತಾಗಿದೆ.
Related Articles
Advertisement
ನಾಲವಾರ ಹೋಬಳಿ ವಲಯದಲ್ಲಿ ಕಳೆದ ವರ್ಷ 15000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿತ್ತು. ಈ ವರ್ಷ 12000-13000 ಹೆಕ್ಟೇರ್ ಮಾತ್ರ ಬೇಡಿಕೆಯಿದೆ. ಆದರೆ ಸದ್ಯ 6000ದಿಂದ 7000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗುತ್ತಿದೆ. ಹೆಸರು ಮತ್ತು ಉದ್ದಿಗೂ ನಿರೀಕ್ಷೆಯಷ್ಟು ಬೇಡಿಕೆಯಿಲ್ಲ. ಆದರೂ ರೈತರ ಬೇಡಿಕೆಗೆ ತಕ್ಕಷ್ಟು (90 ಟನ್) ರಸಗೊಬ್ಬರ ತರಿಸಿಕೊಳ್ಳಲಾಗಿದೆ. ಬೀಜಗಳಿಗಾಗಿಯೂ ರೈತರು ಪರದಾಡುವಂತಿಲ್ಲ. ಒಣ ಬೇಸಾಯಗಾರರು ಮಳೆಯ ನಿರೀಕ್ಷೆಯಲ್ಲಿದ್ದರೆ, ಮಸಾರಿ ಭೂಮಿಯ ರೈತರು ಸ್ಪಿಂಕ್ಲರ್ ಅಳವಡಿಸಿ ಈಗಾಗಲೇ ಬೇಸಾಯ ಶುರು ಮಾಡಿದ್ದಾರೆ. -ಸತೀಶಕುಮಾರ ಪವಾರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ನಾಲವಾರ
-ಮಡಿವಾಳಪ್ಪ ಹೇರೂರ