Advertisement

Goa ಕಾಡು ಪ್ರಾಣಿಗಳ ಕಾಟಕ್ಕೆ ರೈತ ಹೈರಾಣ; ಬೆಳೆದ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

05:32 PM Feb 17, 2024 | Team Udayavani |

ಪಣಜಿ: ಗೋವಾದ ಕೇರಿ ಪಂಚಕ್ರೋಶಿಯಲ್ಲಿ ಹಲವು ವರ್ಷಗಳಿಂದ ಸ್ಥಳೀಯರು ಕಾಡುಪ್ರಾಣಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ, ಇದೀಗ ಈ ಭಾಗದ ರೈತರು, ತೋಟ ಗದ್ದೆಗಳಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ.

Advertisement

ಪಂಚಕ್ರೋಶಿ, ಕೇರಿಯಲ್ಲಿ ತೋಟಗಳಲ್ಲಿ ಕಾಡುಪ್ರಾಣಿಗಳ ಹಿಂಡು ತೋಟಗಳಿಗೆ ನುಗ್ಗಿ ತೋಟಗಳನ್ನು ನಾಶಪಡಿಸುತ್ತಿವೆ. ಸತತ ನಷ್ಟದಿಂದ ರೈತರು ತೀವ್ರ ಕಂಗಾಲಾಗಿದ್ದಾರೆ.

ಜನಸಂದಣಿಯವರೆಗೂ ಕಾಡುಕೋಣಗಳ ಓಡಾಟ ಮುಂದುವರಿದಿರುವುದರಿಂದ ರೈತರೊಂದಿಗೆ ಗ್ರಾಮಸ್ಥರು ಭಯದ ಛಾಯೆಯಲ್ಲಿದ್ದಾರೆ. ಗಾಡೋ ವಾಡ ಕೇರಿಯಲ್ಲಿ ಸಂಚರಿಸುವ 8ರಿಂದ 10 ಕಾಡುಕೋಣಗಳ ಹಿಂಡು ತೋಟಗಾರಿಕೆ ಸೇರಿದಂತೆ ಕೃಷಿಯತ್ತ ಗಮನ ಹರಿಸಿದೆ. ಹೊಸದಾಗಿ ನಾಟಿ ಮಾಡಿದ ಅಡಿಕೆ, ತೆಂಗಿನ ಮರಗಳು ನಾಶವಾಗಿದ್ದು, ರೈತರ ಶ್ರಮ ವ್ಯರ್ಥವಾಗಿದೆ.

ಅಧಿವೇಶನದ ವೇಳೆ ಶಾಸಕಿ ದಿವ್ಯಾ ರಾಣೆ ಅವರು ವಿಧಾನ ಪರಿಷತ್ತಿನಲ್ಲಿ ಕಾಡುಪ್ರಾಣಿಗಳಿಂದ ಆಗುವ ಹಾನಿಯ ಕುರಿತು ವಿಷಯ ಪ್ರಸ್ತಾಪಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next