Advertisement

ಮಳೆಗೆ ಬೆಳೆ ನಾಶ: ಮನನೊಂದ ರೈತ ಆತ್ಮಹತ್ಯೆ

12:38 PM Nov 22, 2021 | Team Udayavani |

ನಾಗರಹಾಳ (ರಾಯಚೂರು): ನಿರಂತರ ಮಳೆಯಿಂದ ಕೈಗೆ ಬಂದ ಬೆಳೆ ಕಳೆದುಕೊಂಡ ಜಿಲ್ಲೆಯ ನಾಗರಹಾಳ ಸಮೀಪದ ಭೋಗಾಪುರ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

Advertisement

ತೊಗರಿ ಮತ್ತು ಭತ್ತದ ಬೆಳೆಯು ನಿರಂತರ ಸುರಿದ ಮಳೆಗೆ ನಾಶವಾಗಿದ್ದಕ್ಕೆ ಬೇಸರಗೊಂಡು ವೀರನಗೌಡ ಶೇಖರಗೌಡ (50 ವ) ಎನ್ನುವ ರೈತ ಹೊಲದಲ್ಲೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.

ಇದನ್ನೂ ಓದಿ:ಪರಿಷತ್ ಚುನಾವಣೆ ಟಿಕೆಟ್: ಊಹಾಪೋಹಗಳಿಗೆ ಉತ್ತರಿಸಲು ಹೋಗಲ್ಲ; ಶಾಸಕ ಎಚ್.ಪಿ.ಮಂಜುನಾಥ್

ಏಳು ಎಕರೆ ಜಮೀನಿನಲ್ಲಿ ಭತ್ತ ತೊಗರಿ ಬಿತ್ತನೆ ಮಾಡಿದ್ದರು. ಲಕ್ಷಾಂತರ ಸಾಲ ಮಾಡಿ ಕೃಷಿ ಮಾಡಿದ್ದ ಎಂದು ತಿಳಿದು ಬಂದಿದೆ.

ಘಟನಾಸ್ಥಳಕ್ಕೆ ಮುದಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next