Advertisement

ಮಂಡ್ಯದಲ್ಲಿ ಮುಂದುವರಿದ ರೈತಾಹುತಿ : ಸಿಎಂ ಸನ್ನಿಧಾನಕ್ಕೆ ರೈತನ ಪತ್ರ 

01:49 PM Nov 23, 2018 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳು ಮುಂದುವರಿದಿದ್ದು,ದುದ್ದ ಬಳಿಯ ಕನ್ನಹಟ್ಟಿಯಲ್ಲಿ  ಶುಕ್ರವಾರ 43 ವರ್ಷ ಪ್ರಾಯದ ಜಯಕುಮಾರ್‌ ಎನ್ನುವ ರೈತ ಸಾಲಬಾಧೆ ಮತ್ತು ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಖಾಸಗಿ ಮತ್ತು ಬ್ಯಾಂಕ್‌ಗಳಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದು , ಗಂಟಲು ಕ್ಯಾನ್ಸರ್‌ ಇರುವುದು ಗೊತ್ತಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮುಖ್ಯಮಂತ್ರಿಗಳ ಸನ್ನಿಧಾನಕ್ಕೆ ಎಂದು ಪತ್ರವನ್ನು ಬರೆದಿಡಲಾಗಿದೆ. 4 ವರ್ಷದಿಂದ ಬರಗಾಲ ಇದ್ದ ಕಾರಣ ಕೃಷಿಯಲ್ಲಿ ಲಾಭ ಬಂದಿಲ್ಲ. ಕೃಷಿಗಾಗಿ ವಿನಿಯೋಗ ಮಾಡಿದ 80 ಸಾವಿರ ರೂಪಾಯಿಯೂ ನಷ್ಟವಾಗಿದೆ. ನನಗೀಗ ಗಂಟಲು ಕ್ಯಾನ್ಸರ್‌ ಇದೆ. ವೈದ್ಯರು ಚಿಕಿತ್ಸೆಗೆ 3 ಲಕ್ಷ ರೂಪಾಯಿ ಬೇಕಾಗುತ್ತದೆ  ಎಂದಿದ್ದಾರೆ ಎಂದು ಬರೆಯಲಾಗಿದೆ.

ಶಿವಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

5 ಲಕ್ಷ ರೂಪಾಯಿ ಪರಿಹಾರ 
ಆತ್ಮಹತ್ಯೆಯ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next