Advertisement

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

02:21 PM Oct 24, 2021 | Team Udayavani |

ಕೋಲಾರ: ಸಲಗ ಸಿನಿಮಾ ಯಶಸ್ವಿಯಾದ ಹಿನ್ನೆಲೆಯಲ್ಲಿ ದುನಿಯಾ ವಿಜಯ್‌ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಹರಕೆ ತೀರಿಸಿದ್ದಾರೆ. ಅಂತರಗಂಗೆ ಬೆಟ್ಟದ ಮೆಟ್ಟಿಲನ್ನು ಮಂಡಿಯೂರಿ ಹತ್ತಿ, ಹರಕೆ ತೀರಿಸಿದರು.

Advertisement

 ಈ ಹಿಂದೆ ಅಭಿಮಾನಿಗಳು ಸಲಗ ಚಿತ್ರವು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣಲಿ ಎಂದು ಹರಕೆ ಹೊತ್ತಿದ್ದರು. ಅದರಂತೆ ದುನಿಯಾ ವಿಜಯ್‌ ಅಭಿಮಾನಿಗಳಾದ ಬೆಗ್ಲಿ ಗ್ರಾಪಂ ಸದಸ್ಯ ಬೆಗ್ಲಿಬೆಣಜೇನಹಳ್ಳಿ ಮಂಜು, ಸ್ನೇಹಿತರು ಮೆಟ್ಟಿಲು ಹತ್ತಿದರು. ದುನಿಯಾ ಮಂಜು ಮಾತನಾಡಿ, ಸಲಗ ಚಿತ್ರದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ.

 ಕೋಲಾರ ನಗರದ ಕಾರಂಜಿಕಟ್ಟೆ ಭವಾನಿ ಚಿತ್ರಮಂದಿರದಲ್ಲಿ ಅ.14 ರಂದು ಚಿತ್ರ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭವಾನಿ ಚಿತ್ರದ ಮಾಲಿಕರಿಗೆ ಕೊರೊನಾ 2ನೇ ಅಲೆಯ ನಂತರ ಸಲಗ ಚಿತ್ರದ ಗಳಿಕೆಯು ಸಂತಸ ತಂದಿದೆ. ಕನ್ನಡ ಚಿತ್ರ ಅಭಿಮಾನಿಗಳು ಕುಟುಂಬ ಸಮೇತರಾಗಿ ಆಗಮಿಸಿ ಚಿತ್ರವನ್ನು ಯಶಸ್ವಿಗೊಳಿಸಲು ಕೋರಿದರು. ದುನಿಯಾ ವಿಜಯ್‌ ಅಭಿಮಾನಿಗಳ ಸಂಘ ಕೋಲಾರ ಜಿಲ್ಲೆಯ ಅಭಿಮಾನಿಗಳು ಹರಕೆ ಯಶಸ್ವಿಗೆ ಸಾಥ್‌ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next