Advertisement

ರಶ್ಮಿಕಾ ಮಂದಣ್ಣ ಕಾರನ್ನು ಹಿಂಬಾಲಿಸಿಕೊಂಡು ಬಂದ ಬೈಕ್‌ ಸವಾರರು; ಕಾರು ನಿಲ್ಲಿಸಿ ನಟಿ ಹೇಳಿದ್ದೇನು?

03:46 PM Dec 27, 2022 | Team Udayavani |

ಚೆನ್ನೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾ ʼವಾರಿಸುʼ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಿನಿಮಾದ ಆಡಿಯೋ ಲಾಂಚ್‌ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನೆರವೇರಿದೆ.

Advertisement

ದಳಪತಿ ವಿಜಯ್‌ ಅವರ ʼವಾರಿಸುʼ ಚಿತ್ರದ ಆಡಿಯೋ ಬಿಡುಗಡೆಯಾದ ಬಳಿಕ ರಶ್ಮಿಕಾ ಅವರನ್ನು ಹಿಂಬಾಲಿಸಿಕೊಂಡು ಬೈಕ್‌ ನಲ್ಲಿ ಅಭಿಮಾನಿಗಳು ಬಂದಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆಡಿಯೋ ಬಿಡುಗಡೆ ಬಳಿಕ ನಟಿ ರಶ್ಮಿಕಾ ತಮ್ಮ ಕಾರಿನಲ್ಲಿ ಕುಳಿತಿದ್ದರು. ಅವರ ಕಾರು ಮುಂದೆ ಹೋಗುತ್ತಿದ್ದಂತೆ ಕೆಲ ಅಭಿಮಾನಿಗಳು ಅವರ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಇದನ್ನರಿತ ರಶ್ಮಿಕಾ ಸಿಗ್ನಲ್‌ ಬಳಿ ಕಾರು ನಿಲ್ಲಿಸಿ, ಅಭಿಮಾನಿಗಳಿಗೆ ವಾಹನ ಚಲಾಯಿಸುವಾಗ ಹೆಲ್ಮೆಟ್‌ ಧರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಕಾರಿನ ಗ್ಲಾಸ್‌ ಕೆಳಗೆ ಮಾಡಿ, ಹಿಂಬಾಲಿಸಿಕೊಂಡು ಬಂದ ಅಭಿಮಾನಿಗಳಿಗೆ ರಶ್ಮಿಕಾ ಅವರು ನೀಡಿರುವ ಸಲಹೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʼವಾರಿಸುʼ ಸಿನಿಮಾದ ಬಳಿಕ ರಶ್ಮಿಕಾ ಅವರ ʼಮಿಷನ್‌ ಮಜ್ನುʼ ಸಿನಿಮಾ ರಿಲೀಸ್‌ ಆಗಲಿದೆ. ರಣ್ಬೀರ್‌ ಕಪೂರ್‌ ಅವರೊಂದಿಗೆ ʼ ಆನಿಮಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼಪುಷ್ಪಾ -2ʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next