Advertisement

ವೇದಿಕೆ ಏರಿ ಸಿಎಂಗೆ ಕುರಿ,ಕಂಬಳಿ ಗಿಫ್ಟ್ ನೀಡಿದ ಅಭಿಮಾನಿ

01:36 PM Aug 27, 2017 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರುಬ ಜನಾಂಗದ ಅಭಿಮಾನಿಯೊಬ್ಬರು ವೇದಿಕೆಯೇರಿ ಕುರಿ ಮತ್ತು  ಕಂಬಳಿ ಉಡುಗೊರೆ ನೀಡಿದ ಘಟನೆ ಭಾನುವಾರ ನಡೆಯಿತು.

Advertisement

ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕುರುಬರ ಸಂಘದ ಸಮಾವೇಶದಲ್ಲಿ  ಈ ಘಟನೆ ನಡೆಯಿತು. ಕುರಿ ಮತ್ತು ಕಂಬಳಿ ಸಮೇತ ವೇದಿಕೆ ಏರಲು ಮುಂದಾದ ರಾಯಚೂರಿನ ಎ.ಆಂಜನೇಯ ಎನ್ನುವವರಿಗೆ ಭದ್ರತಾ ಸಿಬಂದಿಗಳು ತಡೆ ನೀಡಿದರು. ಇದನ್ನು ಗಮನಿಸಿದ ಸಿದ್ದರಾಮಯ್ಯ ವೇದಿಕೆಗೆ ಕಳುಹಿಸುವಂತೆ ಸೂಚನೆ ನೀಡಿದರು.

ಖುಷಿಯಿಂದ ಜೈಕಾರ ಹಾಕುತ್ತಾ ವೇದಿಕೆ ಏರಿದ ಆಂಜನೇಯ ಕುರಿಯನ್ನು ಗಿಫ್ಟ್ ನೀಡಿದರು, ಸಿಎಂಗೆ ಕಂಬಳಿ ಹೊದಿಸಿ ಸಂಭ್ರಮಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next