Advertisement

ಸೆಲ್ಫೀ ತೆಗೆಯಲು ಹೋಗಿ ಕೆರೆಗೆ ಬಿದ್ದು ಯುವತಿ ಸಾವು

07:31 PM Sep 11, 2022 | Team Udayavani |

ಗುಡಿಬಂಡೆ: ಯುವತಿಯೋರ್ವಳು ಸೆಲ್ಫೀ ತೆಗೆಯಲು ಹೋಗಿ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಇದನ್ನೂ ಓದಿ:  ಮಲ್ಪೆ ಬೀಚ್‌: ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ

ಶಿಢ್ಲಘಟ್ಟ ತಾಲೂಕಿನ ಗಾಜಲವಾರಿಪಲ್ಲಿ ಗ್ರಾಮದ ನಿವಾಸಿ ಅಮೃತ (22) ಮೃತ ದುರ್ದೈವಿ.

ಅಮೃತ ಗುಡಿಬಂಡೆ ತಾಲೂಕಿನ ಜಂಬಿಗೆಮರದಹಳ್ಳಿ ಗ್ರಾಮದಲ್ಲಿರುವ ಆಕೆಯ ದೊಡ್ಡಪ್ಪನ ಮನೆಯ ಗೃಹ ಪ್ರವೇಶಕ್ಕೆ ಬಂದಿದ್ದಳು. ಈ ವೇಳೆ ಮಳೆಗೆ ಕೆರೆಯು ತುಂಬಿರುವುದನ್ನು ನೋಡಲು ಹೋಗಿದ್ದಾಗ ಸೆಲ್ಫಿ ತೆಗೆಯಲು ಹೋಗಿ ಕೆರೆಗೆ ಜಾರಿ ಬಿದ್ದು ಮೃತ ಪಟ್ಟಿದ್ದಾಳೆ. ವಿಷಯ ತಿಳಿದ ಸ್ಥಳಿಯರು ಆಕೆಯನ್ನು ನೀರಿನಿಂದ ಮೇಲೆ ತಂದು, ಬದುಕಿಸಲು ಪ್ರಯತ್ನಿಸಿದ್ದಾರೆ.

ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next