Advertisement

ಡೀಸಿ ಕಾಲಿಗೆ ಬಿದ್ದ ರೈತ ವಿಡಿಯೋ ವೈರಲ್‌

12:30 AM Jan 01, 2019 | |

ಗುಣಾ/ಕೋಲ್ಕತಾ: ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ರೈತ ಗ್ರಾಮಕ್ಕೆ ಟ್ರಾನ್ಸ್‌ಫಾರ್ಮರ್‌ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಅನುಗ್ರಹ ಪಿ. ಕಾಲಿಗೆ ಬಿದ್ದ ವಿಡಿಯೋ ಈಗ ವೈರಲ್‌ ಆಗಿದೆ. ಗ್ರಾಮಕ್ಕೆ ವಿದ್ಯುತ್‌ ಕಲ್ಪಿಸಿ, ತನ್ನ ಜಮೀನಿಗೂ ನೀರು ಹಾಯಿಸಲು ವಿದ್ಯುತ್‌ ನೀಡಬೇಕೆಂದು ಒಣಗಿದ ಬೆಳೆ ಸಮೇತ ಬಂದಿದ್ದ ರೈತ ಅಜೀತ್‌ ಜಾತವ್‌. ಕಚೇರಿಯಿಂದ ಜಿಲ್ಲಾಧಿಕಾರಿ ಹೊರ ಬರುತ್ತಿದ್ದಂತೆ ಆತ ಅವರ ಕಾಲಿಗೆ ಬಿದ್ದಿದ್ದಾನೆ. ಅವರು ಸಹಾನುಭೂತಿಯಿಂದ ಮನವಿ ಕೇಳಿದ್ದಾರೆ. ಈ ಹೊತ್ತಿಗಾಗಲೇ ವಿಡಿಯೋ ವೈರಲ್‌ ಆಗಿತ್ತು. ಕೂಡಲೇ ಜಿಲ್ಲಾಡಳಿತ ಗ್ರಾಮಕ್ಕೆ, ರೈತನಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿತ್ತು.

Advertisement

 ಮತ್ತೂಂದೆಡೆ, ಅಲ್ಲಿನ ಕಾಂಗ್ರೆಸ್‌ ಸರಕಾರ ರೈತರ ಸಾಲ ಮನ್ನಾ ಮಾಡಿದೆ ಎಂದು ಘೋಷಿಸಲಾಗಿ ದ್ದರೂ, ಗುಣಾದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡಿಖೇಡಾ ಗ್ರಾಮದ ರೈತ ಲೇವಾದೇವಿದಾರನ ಬಳಿ 40 ಸಾವಿರ ರೂ. ತೆಗೆದುಕೊಂಡಿದ್ದ. ಆತ 70 ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೂಂದೆಡೆ ಬೆಳೆ ನಷ್ಟ ಅನುಭವಿಸಿರುವ ಪಶ್ಚಿಮ ಬಂಗಾಳದ ರೈತರು ಆತ್ಮಹತ್ಯೆ ಮಾಡಿದರೆ ಗೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next