Advertisement

ಜಾತ್ರೆ: 188 ಕುರಿ-ಆಡುಮರಿ ವಶ

01:12 PM Jan 16, 2022 | Team Udayavani |

ಯಾದಗಿರಿ: ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೈಲಾಪುರದ ಮಲ್ಲಯ್ಯನ ಜಾತ್ರೆ ಶುಕ್ರವಾರ ಸರಳವಾಗಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೊಲೀಸ್‌ ಭದ್ರತೆಯಲ್ಲಿ ಜರುಗಿದ್ದು, ಮಲ್ಲಯ್ಯನ ಪಲ್ಲಕ್ಕಿ ಮೇಲೆ ಎಸೆಯಲು ಭಕ್ತರು ತಂದಿದ್ದ 188ಕ್ಕೂ ಹೆಚ್ಚು ಕುರಿ-ಆಡುಮರಿಗಳನ್ನು ಚೆಕ್‌ಪೋಸ್ಟ್‌ ಬಳಿ ಜಿಲ್ಲಾಡಳಿತ ವಶಕ್ಕೆ ಪಡೆದಿದೆ.

Advertisement

ಜಾತ್ರೆಯ ಸಂದರ್ಭದಲ್ಲಿ ಭಕ್ತರು ತಮ್ಮ ಹರಕೆಯ ರೂಪದಲ್ಲಿ ಕುರಿಮರಿಗಳನ್ನು ತೆಗೆದುಕೊಂಡು ಜಾತ್ರೆಗೆ ಆಗಮಿಸಿ ಮಲ್ಲಯ್ಯನ ಪಲ್ಲಕ್ಕಿ ಗಂಗಾ ಸ್ನಾನಕ್ಕೆ ತೆರಳುವ ಸಂದರ್ಭದಲ್ಲಿ ಎಸೆದು ತಮ್ಮ ಭಕ್ತಿ ಮೆರೆಯುತ್ತಿದ್ದರು. ಆದರೆ ಜಾತ್ರೆ ಸಮಯದಲ್ಲಿ ಪ್ರಾಣಿ ಹಿಂಸೆಯಾಗುತ್ತಿದೆ ಎಂದು ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ಕೇಳಿಬಂದ ಪರಿಣಾಮ ಜಿಲ್ಲಾಡಳಿತ ಕಳೆದ 10 ವರ್ಷಗಳಿಂದ ಕುರಿಮರಿ ಎಸೆಯುವುದನ್ನು ನಿಷೇಧಿಸಿದೆ.

ಆದರೂ ಗ್ರಾಮೀಣ ಭಾಗದ ಜನರು ಜಾತ್ರೆ ದಿನದಂದು ಕುರಿಮರಿಗಳನ್ನು ಮೈಲಾಪುರಕ್ಕೆ ತರುತ್ತಾರೆ, ಅವರನ್ನು ಸಿಬ್ಬಂದಿ ಪ್ರವೇಶ ದ್ವಾರದಲ್ಲಿಯೇ ತಡೆದು ಕುರಿಮರಿ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next