Advertisement

ಪೊಲೀಸರಿಂದ ನಟ ಅಲ್ಲು ಅರ್ಜುನ್‌ ಬಂಧನ? ವೈರಲ್‌ ಫೋಟೋ ಹಿಂದಿನ ಅಸಲಿ ರಹಸ್ಯವೇನು?

03:50 PM Mar 21, 2024 | Team Udayavani |

ಹೈದರಾಬಾದ್: ಪ್ಯಾನ್‌ ಇಂಡಿಯಾ ಸ್ಟಾರ್‌ ಅಲ್ಲು ಅರ್ಜುನ್‌ ಸದ್ಯ  ಬಹು ನಿರೀಕ್ಷಿತ ʼಪುಷ್ಪ-2ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Advertisement

ಸೋಶಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಗಳ ಫೋಟೋಗಳು ವೈರಲ್‌ ಆಗುವುದು ಸಾಮಾನ್ಯ ಆದರೆ ಕೆಲವೊಂದು ತಪ್ಪು ಕಾರಣಗಳಿಂದ ಸ್ಟಾರ್‌ ನಟರ ಫೋಟೋಗಳು ವೈರಲ್‌ ಆಗುತ್ತದೆ. ಸತ್ಯಾಸತ್ಯತೆ ಅರಿಯದೆ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಕಮೆಂಟ್‌ ಗಳು ಹರಿದಾಡುತ್ತದೆ.

ಹೀಗೆಯೇ ಅಲ್ಲು ಅರ್ಜುನ್‌ ಅವರ ಇತ್ತೀಚೆಗೆ ಫೋಟೋ ವೈರಲ್‌ ಆಗಿದೆ. ಅಲ್ಲು ಅರ್ಜುನ್‌ ʼಪುಷ್ಪ-2ʼ ಸಿನಿಮಾದಲ್ಲಿ ಕೆಲ ಸಾಹಸಮಯ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಂಟ್‌ ಗಳನ್ನು ಮಾಡಲಿದ್ದಾರೆ. ಸದ್ಯ ಭಾರತದಲ್ಲೇ ಸಿನಿಮಾದ ಚಿತ್ರೀಕರಣ ಆಗುತ್ತಿದೆ. ಆದರೆ ಕೆಲ ಆ್ಯಕ್ಷನ್ ಸೀನ್‌ ಗಳಿಗಾಗಿ ಚಿತ್ರತಂಡ ಮುಂದೆ ಚೀನಾಕ್ಕೆ ಹಾರಾಲಿದೆ ಎನ್ನಲಾಗಿದೆ. ಈ ಕಾರಣದಿಂದ ಅಲ್ಲಿ ವಾಹನಗಳಲ್ಲಿ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣವಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಡ್ರೈವಿಂಗ್‌ ಲೈಸೆನ್ಸ್‌ ಪಡೆಯಬೇಕಿದೆ.

ಈ ಕಾರಣದಿಂದ ಅಲ್ಲು ಅರ್ಜುನ್‌ ಅವರು ಖೈರತಾಬಾದ್ ನಲ್ಲಿರುವ ಆರ್‌ ಟಿಓ ಆಫೀಸ್‌ ಗೆ ತೆರಳಿ ಪರವಾಣಿಗೆ ಪತ್ರವನ್ನು ಪಡೆದುಕೊಂಡಿದ್ದಾರೆ. ಅವರು ಆರ್‌ ಟಿಓ ಕಚೇರಿಗೆ ಹೋಗಿರುವ ಫೋಟೋ ವೈರಲ್‌ ಆಗಿದೆ. ಆದರೆ ಅದರ ಹಿಂದಿನ ಕಾರಣ ತಿಳಿಯದೆ ಕೆಲವೊಂದಿಷ್ಟು ಜನರು ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ.

ಅಲ್ಲು ಅರ್ಜುನ್‌ ಅವರ ಆರ್‌ ಟಿಓ ಭೇಟಿಯ ಫೋಟೋ ಬಳಸಿಕೊಂಡು, ಸೋಶಿಯಲ್‌ ಮೀಡಿಯಾದಲ್ಲಿ ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಹಿಂದಿನ ಕಾರಣ ಏನೆಂದು ತಿಳಿದು ಬಂದಿಲ್ಲ ಎಂದು ಬರೆದುಕೊಂಡಿದ್ದಾರೆ.

Advertisement

ಬಹು ನಿರೀಕ್ಷಿತ ʼಪುಷ್ಪ-2ʼ ಸಿನಿಮಾದಲ್ಲಿ ಅಲ್ಲು ಅರ್ಜುನ್‌, ರಶ್ಮಕಾ ಮಂದಣ್ಣ, ಫಾಹದ್‌ ಫಾಸಿಲ್‌ ಹಾಗೂ ಇತರೆ ಪ್ರಮುಖರು ಕಾಣಸಿಕೊಳ್ಳಲಿದ್ದಾರೆ. ಇದೇ ವರ್ಷದ ಆಗಸ್ಟ್‌ 15 ರಂದು ಸಿನಿಮಾ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next